ವಿಶೇಷ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಸೇವೆಯ ಇತಿಹಾಸದಲ್ಲಿ ಹೊಸ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. ರಸ್ತೆ ಅಪಘಾತಗಳು ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಚಿಕಿತ್ಸೆಯನ್ನು ತ್ವರಿತವಾಗಿ ಒದಗಿಸುವ ಈ ಕೇಂದ್ರವು ಜಿಲ್ಲೆಯ ಜನತೆಗೆ ಮಹತ್ವದ ಆರೋಗ್ಯ ಸೌಲಭ್ಯ ಸಿಗಲಿದೆ.
ಇದುವರೆಗೆ ಗಂಭೀರ ಗಾಯಾಳುಗಳನ್ನು ಮಣಿಪಾಲ, ಹುಬ್ಬಳ್ಳಿ, ಶಿವಮೊಗ್ಗ ಅಥವಾ ಮಂಗಳೂರಿನಂತಹ ದೂರದ ಆಸ್ಪತ್ರೆಗಳಿಗೆ ಸಾಗಿಸಬೇಕಾಗುತ್ತಿತ್ತು. ಚಿಕಿತ್ಸೆಯಲ್ಲಿ ಆಗುತ್ತಿದ್ದ ವಿಳಂಬವು ಅನೇಕ ಬಾರಿ ರೋಗಿಗಳ ಜೀವಕ್ಕೂ ಅಪಾಯವಾಗುತ್ತಿತ್ತು. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕುಮಟಾದಲ್ಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪನೆಯಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಸೇವೆಗೆ ಮಹತ್ವದ ತಿರುವಾಗಿದೆ.
ಈ ಯೋಜನೆ ಸಾಕಾರಗೊಳ್ಳಲು ಕುಮಟಾ–ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರ ನಿರಂತರ ಪ್ರಯತ್ನ ಪ್ರಮುಖ ಪಾತ್ರ ವಹಿಸಿ. ಜನರ ಅಗತ್ಯವನ್ನು ಅರಿತು ಸರ್ಕಾರ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯ ಸಿಎಸ್ಆರ್ ನೆರವನ್ನು ಪಡೆದ ಪರಿಣಾಮ ಇಂದು ಈ ಮಹತ್ವಾಕಾಂಕ್ಷಿ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ. ಇದರೊಂದಿದೆ. ಕುಮಟಾ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ಟಿ ಎಚ್, ಅವರು ಸಹ ಶಾಸಕ ದಿನಕರ ಶೆಟ್ಟಿ ಅವರ ಪ್ರಯತ್ನಕ್ಕೆ ಬೆಂಬೆಲ ನೀಡಿದ್ದಾರೆ.ಆಸ್ಪತ್ರೆಯ ಬಗ್ಗೆ ಬರುವ ಪ್ರತಿಯೊಬ್ಬರ ರೋಗಿಗಳ ಬಗ್ಗೆ ಅಪಾರವಾದ ಕಾಳಜಿಯನ್ನ ಹೊಂದಿದ್ದು, ಆಡಳಿತ ವರ್ಗಕ್ಕೆ ಮಾತ್ರ ಸಿಮೀತಗಾಗಿರುವ ಆಸ್ಪತ್ರೆಯ ಏಳಿಗೆಗೆ ಶ್ರಮಿಸುತ್ತಾ ಬಂದಿದ್ದಾರೆ. ಅದೆ ಟ್ರಾಮಾ ಸೆಂಟರ್ ನಿರ್ಮಾಣ ಕಾರ್ಯದಲ್ಲಿಯೂ ಶಾಸಕ ದಿನಕರ ಶೆಟ್ಟಿ ಹಾಗೂ ಗಣೇಶ ನಾಯ್ಕ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆ ವ್ಯಕ್ತವಾಗಿದೆ.
ಟ್ರಾಮಾ ಕೇರ್ ಸೆಂಟರ್ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ತುರ್ತು ಚಿಕಿತ್ಸಾ ವಿಭಾಗ ಹಾಗೂ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿರುವ ಈ ಟ್ರಾಮಾ ಕೇರ್ ಸೆಂಟರ್ ರಸ್ತೆ ಅಪಘಾತಗಳು, ತೀವ್ರ ಗಾಯಗಳು ಹಾಗೂ ಇತರೆ ತುರ್ತು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. “ಗೋಲ್ಡನ್ ಅವರ್” ಎಂದು ಕರೆಯಲ್ಪಡುವ ಅಪಘಾತದ ನಂತರದ ಮೊದಲ ಒಂದು ಗಂಟೆಯೊಳಗೆ ಚಿಕಿತ್ಸೆ ದೊರಕುವ ಅವಕಾಶ ಹೆಚ್ಚುವುದರಿಂದ ಜೀವ ಉಳಿಸುವ ಸಾಧ್ಯತೆಯೂ ಹೆಚ್ಚಲಿದೆ.
ಜಿಲ್ಲೆಯ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಸ್ಥಳೀಯ ಮಟ್ಟದಲ್ಲೇ ಒದಗಿಸುವ ಈ ಕೇಂದ್ರವು ಉತ್ತರ ಕನ್ನಡದ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಕೇವಲ ಕುಮಟಾ ಅಥವಾ ಹೊನ್ನಾವರ ಭಾಗದ ಜನರಿಗೆ ಮಾತ್ರವಲ್ಲದೆ ಭಟ್ಕಳ, ಅಂಕೋಲಾ, ಗೋಕರ್ಣ, ಯಲ್ಲಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಜನರು ಈ ಸೌಲಭ್ಯದ ಪ್ರಯೋಜನ ಪಡೆಯಲಿದ್ದಾರೆ.
ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿರುವ ಈ ಟ್ರಾಮಾ ಕೇರ್ ಸೆಂಟರ್ ಮುಂದಿನ ದಿನಗಳಲ್ಲಿ ಸಾವಿರಾರು ಜೀವಗಳನ್ನು ರಕ್ಷಿಸುವ ಭರವಸೆಯೊಂದಿಗೆ ಉತ್ತರ ಕನ್ನಡದ ಜನರಿಗೆ ಹೊಸ ಆಶಾಕಿರಣವಾಗಿದೆ.

