ಸುದ್ದಿಬಿಂದು ಬ್ಯೂರೋ ವರದಿ

ಬೆಂಗಳೂರು : ಭಾರತೀಯ ಚಲನಚಿತ್ರ ರಂಗದ ಅದ್ಭುತ ಗಾಯಕರಲ್ಲಿ ಒಬ್ಬರಾದ ಗಂಧರ್ವ ಗಾಯಕಿ ಎಸ್ ಜಾನಕಿ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಜೆ ಮಂಜುನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಶತಮಾನ ಕಂಡ ಮಹಾನ್ ಗಾಯಕಿ ಎಸ್ ಜಾನಕಿ ಕಾಲ ಗರ್ಭದಲ್ಲಿ ಕಣ್ಮರೆಯಾಗಿದ್ದಾರೆ, 20 ಭಾರತೀಯ ಭಾಷೆಗಳಲ್ಲಿ 45 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಸಂಗೀತಪ್ರಿಯರ ಮನದಾಳದಲ್ಲಿ ಅಜರಾಮರ ರಾಗಿದ್ದ ಎಸ್ ಜಾನಕಿ ಅವರ ಅಗಲಿಕೆ ಅತ್ಯಂತ ದುಃಖದಾಯಕ.

ವಿಶೇಷವಾಗಿ ಕನ್ನಡದಲ್ಲಿ ಅವರು ಹಾಡಿದ ಮಧುರ ಗೀತೆಗಳು ಸದಾ ನಮ್ಮ ಮನದಲ್ಲಿ ಉಳಿಯುವಂತಹದ್ದಾಗಿದೆ. ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು, ಅದಲ್ಲದೆ ನಾಲ್ಕು ರಾಷ್ಟ್ರ ಪ್ರಶಸ್ತಿ 45ಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದ ಎಸ್ ಜಾನಕಿ ತಮ್ಮ ಅಮರ ಗಾಯನದ ಮೂಲಕ ಸದಾ ಸಂಗೀತಪ್ರಿಯರ ಸಿನಿ ರಸಿಕರ ಅಂತರಾಳದಲ್ಲಿ ಜೀವಂತವಾಗಿರುತ್ತಾರೆ ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

 ಇದನ್ನೂ ಓದಿ / “14 ವರ್ಷಗಳ ಬಳಿಕ ಸಿಕ್ಕಿಬಿದ್ದ..! 2012ರ ಕೇಸ್‌ನ ಲಾರಿ ಚಾಲಕನ ಬಂಧಿಸಿದ ಅಂಕೋಲಾ ಪೊಲೀಸ್