ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ನಾಯಕತ್ವ ಬದಲಾವಣೆಯ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ನಿವಾಸ ‘ಕಾವೇರಿ’ಯಲ್ಲಿ ಇಂದು ನಡೆದ ಉಪಹಾರ ಸಭೆ ವಿಶೇಷ ಗಮನಸೆಳೆದಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಹ್ವಾನದಲ್ಲಿ ನಡೆದ ಈ ಸಭೆಯಲ್ಲಿ ಸಚಿವರು, ಶಾಸಕರು ಹಾಗೂ ಆಪ್ತ ನಾಯಕರು ಭಾಗವಹಿಸಿದ್ದರು.
ಸಭೆಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತೆರಳಿ ಗೌರವ ಸೂಚಕವಾಗಿ ಕಾಲಿಗೆ ನಮಸ್ಕರಿಸಿದರು.
ಅನಿರೀಕ್ಷಿತ ಈ ಕ್ಷಣ ಅಲ್ಲಿದ್ದ ನಾಯಕರ ಗಮನ ಸೆಳೆಯಿತು. ಬಳಿಕ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರನ್ನು ಕೈಹಿಡಿದು ಎಬ್ಬಿಸಿ ಆತ್ಮೀಯವಾಗಿ ಅಪ್ಪಿಕೊಂಡರು. ಇಬ್ಬರು ನಾಯಕರ ನಡುವಿನ ಈ ಸ್ನೇಹಭಾವದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿತ್ತು. ಅಧಿಕಾರ ಹಂಚಿಕೆ ಸಂಬಂಧ ಪಕ್ಷದ ಉನ್ನತ ಮಟ್ಟದಲ್ಲಿ ಮೊದಲು ಕೆಲವು ಸಮಾಲೋಚನೆಗಳು ನಡೆದಿದ್ದವು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದವು.
ಈ ಉಪಹಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ ನಿರ್ಧಾರದಂತೆ ತಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಎಲ್ಲಾ ಸಚಿವರ ಸಹಕಾರ ಮುಂದೆ ಕೂಡ ಇದೆ ರೀತಿಯಾಗಿರಲಿ ಎಂದು ಸಭೆಯಲ್ಲಿಯೆ ಸಿದ್ದರಾಮಯ್ಯ ಬಹಿರಂಗವಾಗಿಯೇ ತಿಳಿಸಿದ್ದಾರೆ.
ಇದನ್ನೂ ಓದಿ/“ಜೈಲು ಮಂತ್ರಿ ಸಿಎಂ ಆಗ್ತಾನೆ” ಎಂದಿದ್ದ ಬಂಗಾರಪ್ಪ ಮಾತು ಈಗ ಸತ್ಯವಾಗುತ್ತಿದೆಯಾ?

