ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಿದ್ಯಾರ್ಥಿ ದಿಶಾಂತ್ ನಾಯ್ಕ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕುಮಟಾ ತಾಲೂಕಿನ ಡಾ. ಎ.ವಿ. ಬಾಳಿಗಾ ಶಾಲೆಯ ವಿದ್ಯಾರ್ಥಿಯಾಗಿರುವ ದಿಶಾಂತ್, ಒಟ್ಟು 625 ಅಂಕಗಳಲ್ಲಿ 624 ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದ್ದಾನೆ. ಈ ಮೂಲಕ ತನ್ನ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಜೇಷ್ಠಪುರ ಗ್ರಾಮದ ದಯಾನಂದ ನಾಯ್ಕ ಅವರ ಪುತ್ರನಾದ ದಿಶಾಂತ್, ತನ್ನ ಈ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರ ನಿರಂತರ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಕಾರಣ ಎಂದು ತಿಳಿಸಿದ್ದಾನೆ.
ಇದೇ ವೇಳೆ, ದಿಶಾಂತ್ನ ಈ ಸಾಧನೆಗೆ ಶಾಲೆಯ ಶಿಕ್ಷಕರು, ಬಂಧುಬಳಗ ಮತ್ತು ಸ್ಥಳೀಯರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ/ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: 94.1% ಪಾಸ್, ದಕ್ಷಿಣ ಕನ್ನಡ ನಂ.1 ಉಡುಪಿ ದ್ವಿತೀಯ, ಉತ್ತರಕನ್ನಡಕ್ಕೆ 3ನೇ ಸ್ಥಾನ

