ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ನಲ್ಲಿ ಗೊಂದಲದ ವಾತಾವರಣ ಮುಂದುವರಿದಿದ್ದು, Uttara Kannada Congress Conflict ಪಕ್ಷದ ಒಳಗಿನ ನಿರ್ಣಯಗಳು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ.
ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯ ಬನವಾಸಿ ಬ್ಲಾಕ್ ಕಾಂಗ್ರೆಸ್ನ ಬನವಾಸಿ ಪಂಚಾಯತ್ ಘಟಕದ ಅಧ್ಯಕ್ಷರನ್ನಾಗಿ RSS ಜೊತೆ ಸಂಬಂಧ ಹೊಂದಿರುವ ಸಿದ್ದವೀರೇಶ್ ಮೇಘರಾಜ್ ನರೇಗಲ್ ಅವರನ್ನು ನೇಮಕ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ Controversial Appointments Karnataka ಆಕ್ರೋಶ ವ್ಯಕ್ತವಾಗಿದೆ. ಇದೀಗ ಮತ್ತೊಂದು ಬೆಳವಣಿಗೆಯಲ್ಲಿ ಧಾರವಾಡ ಹಾಲು ಒಕ್ಕೂಟಕ್ಕೆ ಬಿಜೆಪಿ ಹಿನ್ನೆಲೆಯೊಂದಿಗೆ ಗುರುತಿಸಿಕೊಂಡಿರುವ ಸಾಧನ ರಾಜೇಶ್ ಭಟ್ಟ ಅವರನ್ನು ನೇಮಕ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಈ ನೇಮಕಾತಿಗಳ ವಿರುದ್ಧವಾಗಿ ಜಿಲ್ಲೆಯ ಕೆಲವು ಕಾಂಗ್ರೆಸ್ ಹಿರಿಯ ಮುಖಂಡರು Congress Protest News ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಧರಣಿ ನಡೆಸಲು ಕೆಪಿಸಿಸಿ ಮಟ್ಟದ ನಾಯಕರ ಅನುಮತಿ ಪಡೆದಿರುವುದಾಗಿ ತಿಳಿದುಬಂದಿದೆ.
ಇನ್ನೆರಡು ದಿನಗಳಲ್ಲಿ ಈ ಆದೇಶಗಳನ್ನು ಹಿಂಪಡೆಯದಿದ್ದರೆ, ಸ್ಥಳೀಯ ಕಾಂಗ್ರೆಸ್ ನಾಯಕರಿಂದಲೇ ಪಕ್ಷ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಬೇಕಾಗುವ ಸಾಧ್ಯತೆ ಇದೆ. ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಕೆಳಹಂತದಿಂದ ಸಂಘಟನೆ ಮಾಡಿದ ಕಾರ್ಯಕರ್ತರನ್ನು ಸರ್ಕಾರ ಅಧಿಕಾರಕ್ಕೆ ಬಂದ ನಂತರ Party Workers Neglected ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅನೇಕ ಕಾರ್ಯಕರ್ತರು ಸಣ್ಣ ಹುದ್ದೆಗಳಿಗೂ ವರ್ಷಗಳ ಕಾಲ ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ, ವಿರೋಧ ಪಕ್ಷದ ಕಾರ್ಯಕರ್ತರಿಗೆ ಹುದ್ದೆಗಳು ಸಿಗುತ್ತಿರುವುದು Political Favoritism Issue ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಈ ಎರಡು ನೇಮಕಾತಿಗಳ ಹಿಂದೆ ಜಿಲ್ಲೆ ಓರ್ವ ಶಾಸಕರ ಪ್ರಭಾವವಿದೆ ಎನ್ನುವ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿದ್ದು, ಅವರು ಅಧಿಕೃತವಾಗಿ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿರದಿದ್ದರೂ ತಮಗೆ ಬೇಕಾದವರನ್ನು ಹುದ್ದೆಗಳಿಗೆ ನೇಮಕ ಮಾಡಿಸುತ್ತಿದ್ದಾರೆನ್ನಲಾಗುತ್ತಿದೆ. ಇದು MLA Influence Allegation ಇದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಚರ್ಚೆ ನಡೆಯುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕಾದ ಶಿರಸಿ ಶಾಸಕರು ತಮಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ಇದ್ದಾರೆ ಎನ್ನಲಾಗುತ್ತಿದೆ. ಇದಕ್ಕೂ ಪ್ರಮುಖ ಕಾರಣವಾಗಿ ಇನ್ನೊಬ್ಬ ಶಾಸಕರೊಂದಿಗೆ ಅವರ ಹೊಂದಾಣಿಕೆ ಇದೆ ಎಂಬುದು Political Silence Controversy ಕಾರ್ಯಕರ್ತರ ಅಭಿಪ್ರಾಯ. ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಿಗೂ ಸಹ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎನ್ನಲಾಗುತ್ತಿದ್ದು, ಜಿಲ್ಲೆಯಲ್ಲಿ ಹೆಸರಿಗಷ್ಟೆ ಜಿಲ್ಲಾಧ್ಯಕ್ಷರಾಗಿದ್ದಾರೆ. ಪಕ್ಷದ ಯಾವುದೇ ಸಣ್ಣ ಹಿಡಿತವು ಸಹ ಜಿಲ್ಲಾಧ್ಯಕ್ಷರ ಬಳಿ ಇಲ್ಲದಂತಾಗಿದೆ ಅಂತಾ ಅವರದೆ ಪಕ್ಷದ ಕಾರ್ಯಕರ್ತರು Weak District Leadership ಆಡಿಕೊಳ್ಳುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಯಿಂದಾಗಿ ಮುಂದೆ ಬರುವ ಸರಣಿ ಚುನಾವಣೆಗಳನ್ನು ಎದುರಿಸಲು ಸಜ್ಜಾಗಬೇಕಾದ ಸಂದರ್ಭದಲ್ಲಿ ಪಕ್ಷದೊಳಗಿನ ಗೊಂದಲಗಳು ಕಾಂಗ್ರೆಸ್ಗೆ Election Impact Congress ಹಿನ್ನಡೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ.
ಇದನ್ನೂ ಓದಿ/ ಖರ್ಗೆ ಹೇಳಿಕೆ ತಿರುಚಿದ ಆರೋಪ: ಬಿಜೆಪಿಗೆ ಕಾಂಗ್ರೆಸ್ ಕೌಂಟರ್ ಅಟ್ಯಾಕ್



