ಸುದ್ದಿಬಿಂದು ಬ್ಯೂರೋ ವರದಿ | Kumta News | Snake Rescue
ಕುಮಟಾ: ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣ ಹೆಗಡೆಯವರ ಮನೆಯ ತೋಟದಲ್ಲಿ ಕಳೆದ ಐದು ದಿನಗಳಿಂದ ಓಡಾಡುತ್ತಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಕುಮಟಾದ ಉರಗ ತಜ್ಞ ಪವನ್ ನಾಯ್ಕ ಅವರು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. (Wildlife Rescue, Forest News)
ತೋಟದಲ್ಲಿ ಐದು ದಿನಗಳಿಂದ ಸರ್ಪ ಸಂಚರಿಸುತ್ತಿದ್ದು, ಕೆಲಸ ಕಾರ್ಯ ನಡೆಸುವುದು ಕಷ್ಟವಾಗಿತ್ತು. ಇದರಿಂದ ತೋಟದ ಮಾಲೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. (Snake Awareness | Safety Tips) ಕಾಳಿಂಗ ಸರ್ಪ ತೋಟ ಬಿಟ್ಟು ತೆರಳದೇ 5-6 ದಿನಗಳ ಕಾಲ ಅಲ್ಲೇ ವಾಸವಾಗಿತ್ತು.
ತೋಟದಲ್ಲಿ ಪದೇಪದೇ ಸರ್ಪ ಕಾಣಿಸಿಕೊಂಡ ಕಾರಣ ಕೆಲಸಗಾರರು ಭಯಭೀತರಾಗಿ ಕಳೆದ 3-4 ದಿನಗಳಿಂದ ತೋಟಕ್ಕೆ ಬರದೇ ಕೆಲಸ ಸಂಪೂರ್ಣ ಸ್ಥಗಿತಗೊಂಡಿತ್ತು. (Local News | Breaking News) ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಸ್ಥಳೀಯರು ಉರಗ ತಜ್ಞ ಸ್ನೇಕ್ ಪವನ್ ಅವರನ್ನು ಕರೆಸಿ, ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. (Emergency Rescue | Wildlife Protection)
ರಕ್ಷಿಸಲ್ಪಟ್ಟ ಕಾಳಿಂಗ ಸರ್ಪವು ಸುಮಾರು 15 ಅಡಿ ಉದ್ದವಿದ್ದು, 11.340 ಕೆಜಿ ತೂಕ ಹೊಂದಿದೆ. ಇಷ್ಟು ಭಾರವಾದ ಕಾಳಿಂಗ ಸರ್ಪವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ರಕ್ಷಿಸಿದ ಉದಾಹರಣೆಗಳು ಅಪರೂಪವಾಗಿದೆ.(Rare Snake | King Cobra)
ಈ ಕುರಿತು ಮಾಹಿತಿ ನೀಡಿದ ಪವನ್ ನಾಯ್ಕ್, “ಕಳೆದ ವರ್ಷ ಆಗುಂಬೆಯಲ್ಲಿ 12.750 ಕೆಜಿ ತೂಕದ ಕಾಳಿಂಗ ಸರ್ಪ ಸಿಕ್ಕಿದ್ದು, ಅದು ದೇಶದಲ್ಲಿಯೇ ಅತೀ ಭಾರವಾದ ಕಾಳಿಂಗವಾಗಿತ್ತು. ನನ್ನ 16 ವರ್ಷಗಳ ಉರಗ ಸಂರಕ್ಷಣಾ ಕಾರ್ಯದಲ್ಲಿ ಇದು 100ನೇ ಕಾಳಿಂಗ ರಕ್ಷಣೆ” ಎಂದಿದ್ದಾರೆ. (Snake Expert | Wildlife Conservation)
ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳನ್ನು ಕಂಟೆಂಟ್ ಕ್ರಿಯೇಟರ್ ದೀಪ ಕೋಡಿಯ ಅವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. (Viral Video | Social Media)
ಸ್ಥಳೀಯರು ಉರಗ ತಜ್ಞರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಾವು ಮತ್ತು ಮಾನವರ ನಡುವಿನ ಸಂಘರ್ಷ ತಪ್ಪಿಸಲು ಇಂತಹ ಕ್ರಮಗಳು ಅಗತ್ಯವೆಂದು ತಿಳಿಸಿದ್ದಾರೆ.
ಇದನ್ನೂ ಓದಿ/ಕೋಟೆ ಆಂಜನೇಯನಿಗೆ ಬೆಳ್ಳಿ ಭೀಮಗದೆ ಸಮರ್ಪಿಸಿದ ಶಾಸಕ ಭೀಮಣ್ಣ ನಾಯ್ಕ

