ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾಂಗ್ರೆಸ್ ಮುಖಂಡ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಗೃಹ ಸಚಿವರ ಆಪ್ತರಾಗಿದ್ದ ಅಂಕೋಲಾದ ಗೋಪಾಲಕೃಷ್ಣ ನಾಯ್ಕ ಅವರ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ‌ ಜಿಲ್ಲಾ ಕಾಂಗ್ರೆಸ ಮೌನವೇಕೆ ಎಂದ ಶಿರ್ಷಿಕೆಯಲ್ಲಿ ಸುದ್ದಿಬಿಂದು ನ್ಯೂಸ್‌ಮಾಡಿದ ಬೆನ್ನಲೇ ಇದೀಗ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಗೋಪಾಲಕೃಷ್ಣ ನಾಯ್ಕ ಮೇಲೆ ನಡೆದ ಹಲ್ಲೆಯ ಬಗ್ಗೆ ತಮ್ಮ x ಖಾತೆಯ ಮೂಲಕ‌ ತೀವೃವಾಗಿ ಖಂಡಿಸಿದ್ದಾರೆ.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಂಕೋಲಾದ ಗೋಪಾಲಕೃಷ್ಣ ನಾಯಕ್‌ ಅವರ ಮೇಲೆ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯ ಘಟನೆ ತೀವ್ರ ಖಂಡನೀಯವಾಗಿದೆ. ಇಂತಹ ಕಾನೂನುಬಾಹಿರ ಕೃತ್ಯಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತವು ಆಗಿದ್ದು,ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ.

ದೇವರ ಕೃಪೆಯಿಂದ ಗೋಪಾಲಕೃಷ್ಣ ನಾಯಕ್ ಅವರು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವುದು ಸಂತಸದ ವಿಷಯ. ಶೀಘ್ರದಲ್ಲೇ ಅವರು ಮತ್ತೆ ಜನಸೇವೆಯಲ್ಲಿ ಸಕ್ರಿಯರಾಗಲೆಂದು ಆರ್ ವಿ ದೇಶಪಾಂಡೆ ಹಾರೈಸಿದ್ದಾರೆ

ಇನ್ನೂ ಪ್ರಕರಣಕ್ಕೆ ಸಂಬಂಧಿಸಿ ಏಳುಮಂದಿ ಆರೋಪಿಗಳನ್ನ ಈಗಾಗಲೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪ್ರಮುಖ ಆರೋಪಿಗಾಗಿ ತನಿಖೆ ಮುಂದುವರೆದಿದೆ..

ಇದನ್ನೂ ಓದಿ/ಆರೋಗ್ಯ ವಿಮೆ ತೆಗೆದುಕೊಳ್ಳದಿದ್ದರೆ ಲಕ್ಷಾಂತರ ಖರ್ಚು: ಸರಿಯಾದ Health Insurance ಆಯ್ಕೆ ಹೇಗೆ?