ಸುದ್ದಿಬಿಂದು ನ್ಯೂಸ್ ಡೆಸ್ಕ್
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಇರಾನ್ ತನ್ನ ಪ್ರತೀಕಾರವಾಗಿ ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಕರಣಾ ಘಟಕಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ ಘಟನೆ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಯಾಗಿದ್ದು, ಇದರಿಂದ ಭಾರತದಲ್ಲಿ ಇಂಧನ ತುರ್ತು ಪರಿಸ್ಥಿತಿಯ ಭೀತಿ ಎದುರಾಗಿದೆ. 

ಗಲ್ಫ್ ಪ್ರದೇಶದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡ ಈ ದಾಳಿ, ಜಾಗತಿಕ ತೈಲ ಸರಬರಾಜಿನ ಸ್ಥಿರತೆಯನ್ನೇ ಪ್ರಶ್ನಿಸುವಂತಾಗಿದೆ.ಸೌದಿ ಅರೇಬಿಯಾದ ರೆಡ್ ಸೀ ಕರಾವಳಿ ಭಾಗದಲ್ಲಿರುವ ತೈಲ ಸಂಸ್ಕರಣಾ ಘಟಕಕ್ಕೆ ತೀವ್ರ ಹಾನಿ ಸಂಭವಿಸಿದ್ದು, ತಾತ್ಕಾಲಿಕವಾಗಿ ಉತ್ಪಾದನೆ ವ್ಯತ್ಯಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ.ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಏರಿಕೆಯಾಗಿದ್ದು, ಆರ್ಥಿಕ ಒತ್ತಡ ಹೆಚ್ಚುವ ಲಕ್ಷಣಗಳು ಕಾಣಿಸುತ್ತಿವೆ.

ಇದರ ಜೊತೆಗೆ ಕತಾರ್, ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ ಇಂಧನ ಘಟಕಗಳ ಮೇಲೂ ದಾಳಿಯ ಭೀತಿ ಎದುರಾಗಿದ್ದು, ಇಂಧನ ಭದ್ರತೆ ಗಂಭೀರ ಸವಾಲಿನಲ್ಲಿದೆ.ಈ ದಾಳಿಯ ಪರಿಣಾಮವಾಗಿ, ಕಚ್ಚಾ ತೈಲದ ಬೆಲೆ ತೀವ್ರ ಏರಿಕೆ, ಅನಿಲ (LNG) ಸರಬರಾಜಿನಲ್ಲಿ ವ್ಯತ್ಯಯ ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಉಂಟಾಗಲಿದೆ

ಇದರಿಂದಾಗಿ ನೇರವಾಗಿ ಭಾರತದ ಮೇಲೆ ಪರಿಣಾಮ ಉಂಟಾಗಲಿದ್ದು ಇಂಧನ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.‌ಭಾರತ ಇಂಧನದ ಬಹುಪಾಲನ್ನು ಆಮದು ಮಾಡಿಕೊಳ್ಳುವುದರಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಉಂಟಾಗಲಿದೆ. ಇನ್ನೂ  LPG ಸಿಲಿಂಡರ್ ಬೆಲೆ ಸಹ ಏರಿಕೆ ಕಾಣಲಿದೆ. ಇದರ ಪರಿಣಮ ಸಾಮಾನ್ಯ ಜನರ ಬದುಕಿನ ಮೇಲೆ‌ ದೊಡ್ಡ ಪೆಟ್ಟು ಕೊಡುವ ಸಾಧ್ಯತೆ

ಕತಾರ್‌ನಿಂದ ಭಾರತಕ್ಕೆ ಬರುವ ಅನಿಲ ಸರಬರಾಜು ವ್ಯತ್ಯಯಗೊಂಡರೆ.ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಉಂಟಾಗಲಿದ್ದು ಇದರಿಂದ‌‌ಕೈಗಾರಿಕೆಗಳಿಗೆ ಸಂಕಷ್ಟ ಎದುರಾಗಲಿದೆ. ತೈಲ ಬೆಲೆ ಏರಿಕೆ ಆದರೆ ಉಳಿದ ಎಲ್ಲಾ ಆಹಾರ ವಸ್ತುಗಳ ಬೆಲೆ ಏರಿಕೆ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹಾರ್ಮುಜ್ ಸಮುದ್ರ ಸಂಕುಲದಲ್ಲಿ ಉದ್ವಿಗ್ನತೆ ಹೆಚ್ಚಾದರೆ ಭಾರತಕ್ಕೆ ಬರುವ ತೈಲ ಸಾಗಣೆಗೆ ತೊಂದರೆ ಉಂಟಾಗಿ‌ ಸರಬರಾಜಿನಲ್ಲಿ ಇನ್ನಷ್ಟು ವಿಳಂಬ ಆಗಲಿದೆ.

ಒಟ್ಟಿನಲ್ಲಿ ಇರಾನ್–ಸೌದಿ ನಡುವಿನ ಉದ್ವಿಗ್ನತೆ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸೂಚನೆ ನೀಡುತ್ತಿದೆ. ಇದರ ನೇರ ಪರಿಣಾಮವಾಗಿ ಭಾರತದಲ್ಲಿ ಇಂಧನ ಬೆಲೆ ಏರಿಕೆ,  ಹಾಗೂ ಆರ್ಥಿಕ ಒತ್ತಡ ಹೆಚ್ಚುವ ಸಾಧ್ಯತೆ ಇದೆ.ಪರಿಸ್ಥಿತಿ ಇದೆ ರೀತಿ ಮುಂದುವರಿದರೆ, ಭಾರತದ ಆರ್ಥಿಕತೆಗೆ ಇದು ಗಂಭೀರ ಸವಾಲಾಗಿ ಪರಿಣಮಿಸಬಹುದು.

ಇದನ್ನ ಓದಿ/ಕೊಂಕಣ ಮರಾಠ ಮಂಡಳದಿಂದ 27ನೇ ಯುಗಾದಿ ಉತ್ಸವ: ರೂಪಾಲಿ ನಾಯ್ಕ್ ಅವರಿಗೆ ಸನ್ಮಾನ