ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕೊಂಕಣ ಮರಾಠ ಮಂಡಳ ಸದಾಶಿವಗಡದ ವತಿಯಿಂದ 27ನೇ ಯುಗಾದಿ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಸಂತೋಷ ನಾಯ್ಕ್ ಅವರನ್ನು ಮಂಡಳದ ಕಮಿಟಿ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರೂಪಾಲಿ ನಾಯ್ಕ್ ಅವರು, ಕೊಂಕಣ ಮರಾಠಾ ಸಮಾಜದ ಯುವಕರು ಉದ್ಯೋಗಕ್ಕಾಗಿ ಗೋವಾ ಸೇರಿದಂತೆ ಹೊರ ರಾಜ್ಯಗಳಿಗೆ ತೆರಳುತ್ತಿರುವುದು ಗಮನಾರ್ಹ ಸಂಗತಿ ಎಂದರು. ನಮ್ಮದೇ ಸಮಾಜದ ಉದ್ಯಮಿಗಳು ಮುಂದೆ ಬಂದು ಸ್ಥಳೀಯ ಮಟ್ಟದಲ್ಲೇ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರವಾರ–ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಕೃಷ್ಣ ಸೈಲ್, ಗೋವಾ ಪೊಲೀಸ್ ವರಿಷ್ಠಾಧಿಕಾರಿ ಗುರುದಾಸ ಆನಂದು ಕದಂ, ಗೋವಾ ಶಿಕ್ಷಣ ತಜ್ಞ ಹಾಗೂ ಖ್ಯಾತ ಕೊಂಕಣಿ ಬರಹಗಾರ ಡಾ. ರಾಜಯ್ ಪವಾರ್, ಮಂಡಳದ ಅಧ್ಯಕ್ಷ ಗಜಾನನ ಆನಂದು ರಾಣೆ ಸೇರಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಯುಗಾದಿ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದ್ದು, ಸಮಾರಂಭಕ್ಕೆ ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
सदाशिवगडांत कोंकण मराठा मंडळाचो २७वो उगादी उत्सव: रूपाली नायकांचो सन्मान
सदाशिवगड: कोंकण मराठा मंडळ, सदाशिवगड हांच्या वतीन २७वो उगादी वार्षिकोत्सव उत्साहान साजरो जाला. या प्रसंगी राज्य भाजप उपाध्यक्ष रूपाली संतोष नायक हांचो मंडळाच्या कमिटीन विशेष सन्मान केलो.
सन्मान स्विकारून उलयता रूपाली नायक हांनी सांगलं की, कोंकण मराठा समाजाचे युवाक रोजगारा खातीर गोवा आनी हेर ठिकाणी वचत आसात, ही चिंता करपाची गोष्ट आसा. आपल्या समाजाच्या उद्योगपतींनी पुढें येवन स्थानिक पातळीवर उद्योग स्थापन करून युवांक रोजगाराची संधी दियो, अशी विनंती तांनी केली.
या कार्यक्रमांत कारवार-अंकोला मतदारसंघाचे आमदार सतीश कृष्ण साईल, गोवा पोलिस अधीक्षक गुरुदास आनंद कदं, गोवा शिक्षण तज्ञ आनी ख्यातनाम कोंकणी लेखक डॉ. राजय पवार, मंडळाचे अध्यक्ष गजानन आनंद राणे आनी कार्यकारिणी सदस्य उपस्थित आसले.
उगादी निमित्त विविध सांस्कृतिक कार्यक्रमयांचो आयोजन केल्लो, आनी मोठ्या संख्येन लोकांनी हजेरी लावून कार्यक्रम यशस्वी केलो.
ಇದನ್ನೂ ಓದಿ/LPG misuse/ಗ್ರಹಬಳಕೆ ಸಿಲಿಂಡರ್ ದುರುಪಯೋಗ: ಹೋಟೆಲ್ಗಳ ಮೇಲೆ ದಾಳಿ, 5 ಸಿಲಿಂಡರ್ ವಶಕ್ಕೆ



