ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಭಟ್ಕಳ ಮತ್ತು ಮುರುಡೇಶ್ವರದ ಆಸುಪಾಸಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಅಪರಾಧ ಪ್ರಕರರಣಗಳು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿವೆ. ಇವೆಲ್ಲವನ್ನ ನೋಡಿದ್ದರೆ ಕಾಂಗ್ರೇಸ್ ಭಟ್ಕಳವನ್ನು ಬಾಂಗ್ಲಾ ದೇಶವನ್ನ ಮಾಡಲು ಹೊರಟಿರುವಂತೆ ಕಾಣುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಕಾಂಗ್ರೆಸ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಬೈಲೂರಿನಲ್ಲಿ ಅಪ್ರಾಪ್ತ ಮುಸ್ಲಿಂ ಯುವಕರು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿರುವುದು ಸಾಕ್ಷೀಕರಿಸಿದೆ. ಆದರೆ ಈ ಘಟನೆ ಆಕಸ್ಮಿಕ ಎನ್ನುವಂತೆ ಬಿಂಬಿಸಿ ಅದನ್ನು ನಿರ್ಲಕ್ಷ್ಯ ಮಾಡುವ ಪ್ರಯತ್ನಗಳೂ ನಡೆದಿದೆ. ಆದರೆ ಇದು ಆಕಸ್ಮಿಕ ಘಟನೆಯಾಗಿರಲೇ ಇಲ್ಲ. ಬದಲಾಗಿ ಇದೊಂದು ವ್ಯವಸ್ಥಿತ ಸಂಚು ಮತ್ತು ಆಡಳಿತ ಯಂತ್ರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸದಾ ಕಾಲ ಅಭಿವೃದ್ಧಿ ಮತ್ತು ಶಾಂತಿಯ ಮಾತಾಡುವ ಮಂಕಾಳ ವೈದ್ಯರು, ಹಿಂದೂಗಳ ಮನೆಗೆ ಕಲ್ಲು ಬಿದ್ದಾಗ ತುಟಿ ಬಿಚ್ಚದೇ ಕುಳಿತಿದ್ದಾರೆ. ಅಂದರೆ ವೈದ್ಯರು ತಮ್ಮ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇದಕ್ಕೆ ಪರೋಕ್ಷ ಬೆಂಬಲ ನೀಡಿದರೆ? ಅಥವಾ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತರ ಸುರಕ್ಷತೆಯನ್ನು ಅಡವಿಟ್ಟಿದ್ದೀರಾ? ಕಲ್ಲು ಬಿದ್ದಿದ್ದು ಜನರ ಮನೆಗಳಿಗಲ್ಲ, ಬದಲಾಗಿ ನಮ್ಮ ಜಿಲ್ಲೆಯ ಕಾನೂನು ಗೌರವಕ್ಕೆ. ಆ ಕಲ್ಲು ಏನಾದರೂ ಜನರ ತಲೆಗೆ ಬಿದ್ದು ಜೀವಹಾನಿಯಾಗಿದ್ದರೆ ಅದರ ಜವಾಬ್ದಾರಿ ಯಾರು ಹೊರಬೇಕಿತ್ತು? ಅಲ್ಲದೇ ಈ ಘಟನೆಗೆ ಸಂಬಂಧಿಸಿ ಯಾಒಬ್ಬ ಕಾಂಗ್ರೆಸ್ ನಾಯಕರು, ಸಚಿವರು ಖಂಡಿಸಿಲ್ಲ, ವೈದ್ಯರ ಸ್ವ ಕ್ಷೇತ್ರದಲ್ಲೇ ಇಂಥ ಘಟನೆ ನಡೆದಾಗ ಇದರ ನೇರ ಹೊಣೆ ಹೊರಬೇಕಾಗುತ್ತದೆ ಎಂದಿದ್ದಾರೆ.
ಅಪ್ರಾಪ್ತ ವಯಸ್ಸಿನ ಯುವಕರು ಗಾಂಜಾ ಅಮಲಿನಲ್ಲಿ ಅಥವಾ ಪ್ರಚೋದನೆಗೆ ಒಳಗಾಗಿ ಇಂತಹ ಕೃತ್ಯವೆಸಗುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಷಯ. ಈ ಯುವಕರಿಗೆ ಇಂತಹ ‘ಜಿಹಾದಿ ಮನಸ್ಥಿತಿ’ ಬರುತ್ತಿರುವುದು ಎಲ್ಲಿಂದ? ಮದರಸಗಳಲ್ಲಿ ಏನು ಕಲಿಸಲಾಗುತ್ತಿದೆ ಎಂಬ ಬಗ್ಗೆ ಪಾರದರ್ಶಕ ತನಿಖೆಯಾಗಬೇಕಿದೆ. ಮದರಸಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಅಲ್ಲಿ ನಡೆಯುವ ಬೋಧನೆಗಳ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರನ್ನು ಮಿತಿಮೀರಿ ಓಲೈಸುತ್ತಿರುವುದೇ ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಕೊಲೆ, ದರೋಡೆ ಮತ್ತು ಗಾಂಜಾ ಮಾಫಿಯಾಗಳು ರಾಜಾರೋಷವಾಗಿ ನಡೆಯುತ್ತಿವೆ. ಹಿಂದೆ ನಾನು ಎಲ್ಲೆಲ್ಲೋ ಗುಂಡು ಹೊಡೆಯುತ್ತೇನೆ ಎಂದು ಅಬ್ಬರಿಸುತ್ತಿದ್ದ ಸಚಿವರು, ಈಗ ಜಿಲ್ಲೆಯಲ್ಲಿ ಅಕ್ರಮಗಳು ನಡೆಯುತ್ತಿದ್ದರೂ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ…
ಪೊಲೀಸರು ಕೇವಲ ಯುವಕರನ್ನು ಬಂಧಿಸಿ ಕೈತೊಳೆದುಕೊಂಡರೆ ಸಾಲದು, ಅವರ ಹಿಂದೆ ಇರುವ ಪ್ರಚೋದನಾಕಾರಿ ಶಕ್ತಿಗಳನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ. .ಭಟ್ಕಳವನ್ನಾಗಲಿ ಅಥವಾ ಜಿಲ್ಲೆಯ ಯಾವುದೇ ಭಾಗವನ್ನಾಗಲಿ ಮತ್ತೊಂದು ‘ಬಾಂಗ್ಲಾ’ ಮಾಡಲು ಇಲ್ಲಿನ ಜನರು ಬಿಡುವುದಿಲ್ಲ. ಹಿಂದೂಗಳು ತಮ್ಮದೇ ನೆಲದಲ್ಲಿ ಭಯದ ನೆರಳಿನಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ.
ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಎಚ್ಚೆತ್ತುಕೊಂಡು ರಾಜಧರ್ಮ ಪಾಲಿಸಬೇಕು. ವೋಟ್ ಬ್ಯಾಂಕ್ಗಿಂತ ಜನರ ಜೀವ ಮುಖ್ಯ ಎಂಬುದು ಅವರಿಗೆ ನೆನಪಿರಲಿ. ಇಲ್ಲದಿದ್ದರೆ, ಈ ಅಸಮಾಧಾನದ ಕಿಚ್ಚು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವ್ಯಾಪಿಸುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ/“ರಾಜ್ಯ ಕಾಂಗ್ರೇಸ್ ಸರ್ಕಾರ ಪತನವಾದರೆ ಬಿಜೆಪಿ ಸಿದ್ಧ!” ಕಾಗೇರಿ ಸ್ಪೋಟಕ ಹೇಳಿಕೆ




