ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ತಾಲೂಕಿನ ಮಂಜಗುಣಿಯಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ನೂತನ ಸೇತುವೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಲೋಕಾರ್ಪಣೆ ಮಾಡಿದರು.

“ಮಂಜಗುಣಿ ಸೇತುವೆ” ಸ್ಥಳೀಯರ ಬಹುಕಾಲದ ಕನಸಾಗಿತ್ತು. ಈ ಸೇತುವೆ ನಿರ್ಮಾಣದಿಂದ ಗ್ರಾಮೀಣ ಪ್ರದೇಶಗಳ ನಡುವಿನ ಸಂಪರ್ಕ ಸುಗಮವಾಗಿದ್ದು, ಜನರ ಸಂಚಾರ, ವ್ಯಾಪಾರ ಹಾಗೂ ಶಿಕ್ಷಣ–ಆರೋಗ್ಯ ಸೇವೆಗಳ ಪ್ರವೇಶಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದೆ.

ಈ ವೇಳೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಆಡಳಿತ ಸುಧಾರಣಾ ಆಯೋಗದ ಆಧ್ಯಕ್ಷ‌ ಆರ್ ವಿ ದೇಶಪಾಂಡೆ, ಸ್ಥಳೀಯ ಶಾಸಕ‌ ಸತೀಶ‌ ಸೈಲ್, ಶಿರಸಿ ಶಾಸಕ‌ ಭೀಮಣ್ಣ ನಾಯ್ಕ,‌ ಕುಮಟಾ‌ದ ಬಿಜೆಪಿ ಶಾಸಕ‌ ದಿನಕರ ಶೆಟ್ಟಿ, ಮಾಜಿ‌ ಶಾಸಕಿ ಶಾರದಾ‌‌ ಶೆಟ್ಟಿ ಸೇರಿದಂತೆ‌‌ ಇನ್ನೂ ಅನೇಕರು ಹಾಜರಿದ್ದರು..

ಇದನ್ನೂ ಓದಿ/ಸರಕಾರಿ ಪ್ರೌಢಶಾಲೆ ಶಿಕ್ಷಕ‌ ಮಂಜುನಾಥ ಅಮಾನತು