ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಶಾಸಕರ ವಿದೇಶ ಪ್ರವಾಸಗಳ ಬಗ್ಗೆ ಸಚಿವ ಮಂಕಾಳ ವೈದ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಹಣ ಜಾಸ್ತಿ ಇದ್ದವರು ವಿದೇಶ ಪ್ರವಾಸಕ್ಕೆ ಹೋಗುತ್ತಾರೆ.ಜನರ ಮೇಲೆ ಪ್ರೀತಿ ಇಲ್ಲದವರಿಗೆ ಮಾತ್ರ ಇಂತಹ ಪ್ರವಾಸಗಳ ಆಸಕ್ತಿ ಬರುತ್ತದೆ” ಎಂದು ಅವರು ಕಿಡಿಕಾರಿದ್ದಾರೆ.

“ನಮಗೆ ಬೇಜಾರಾದಾಗ ವಿದೇಶಕ್ಕೆ ಹೋಗುವ ಅಭ್ಯಾಸವಿಲ್ಲ. ನಮ್ಮ ಬಳಿ ಯಾವಾಗಲೂ ಜನ ಇರುತ್ತಾರೆ. ಕ್ಷೇತ್ರದ ಜನರ ಸಮಸ್ಯೆ, ಅನಾರೋಗ್ಯದಿಂದ ಬಳಲುವವರು, ಬಡವರ ನೆರವಿಗೆ ಹಣವೇ ಸಾಲದು. ಇಂತಹ ಸಂದರ್ಭದಲ್ಲಿ ವಿದೇಶ ಪ್ರವಾಸದ ಬಗ್ಗೆ ಯೋಚಿಸಲು ಸಮಯವೂ ಇಲ್ಲ” ಎಂದು ಹೇಳಿದರು.

“ನಾನು ಕೆಲ ದಿನಗಳ ಹಿಂದೆ ಅಮೇರಿಕೆಗೆ ಹೋಗಿದ್ದೆ. ಅದು ನನ್ನ ಮಗಳನ್ನು ನೋಡುವುದಕ್ಕಾಗಿ. ಅದನ್ನು ರಾಜಕೀಯ ಟೂರು ಅಂತ ಅರ್ಥ ಮಾಡಿಕೊಳ್ಳಬಾರದು” ಎಂದು ಸ್ಪಷ್ಟಪಡಿಸಿದರು.
ಇನ್ನೂ ರಾಜಕೀಯ ಬಣಗಳ ವಿಚಾರವಾಗಿ ಮಾತನಾಡಿದ ಸಚಿವರು, “ನಮಗೆ ಯಾವ ಬಣವೂ ಇಲ್ಲ. ನಮ್ಮದು ಒಂದೇ ಬಣ – ಕಾಂಗ್ರೆಸ್ ಬಣ” ಎಂದಿದ್ದಾರೆ.

ಇದನ್ನೂ ಓದಿ/21ಸಾವಿರಕ್ಕಾಗಿ ನಡೆದ ವೃದ್ದೆಯ ಕೊಲೆ..! ಆರೋಪಿಗೆ ಜೀವಾವಧಿ ಶಿಕ್ಷೆ