ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ :ತಾಲೂಕಿನ ಗುಣವಂತೆಯ ಖಾಸಗಿ ಬಸ್‌ನ ವಿವಾಹಿತ ಚಾಲಕನ ರಾಸಲೀಲೆ ಪ್ರಕರಣ  ತಾಲೂಕಿನಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಗುಣವಂತೆ ಮೂಲದ ವಿವಾಹಿತನೊಬ್ಬ, ಪಕ್ಕದ ಭಟ್ಕಳ ತಾಲೂಕಿನ ಯುವತಿಯೊಂದಿಗೆ ಖಾಸಗಿ ಬಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ನಡೆಸಿದ ರಾಸಲೀಲೆ ಪ್ರಸಂಗ ಇದೀಗ ಚರ್ಚೆಯ ವಿಷಯವಾಗಿದೆ. ಈತ ಆಕೆಯೊಂದಿಗೆ ನಡೆಸಿದ ರಾಸಲೀಲೆಯ ಕೆಲವು ಫೋಟೋಗಳನ್ನು ಆ ಯುವತಿಯೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಚಾಲಕನ ರಾಸಲೀಲೆ  ಖಾಸಗಿ ಬಸ್ ಮಾಲೀಕರ ಗಮನಕ್ಕೆ ಬರುತ್ತಿದಂತೆ ಚಾಲಕನನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ..

ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದ ಫೋಟೋಗಳನ್ನು ಡಿಲೀಟ್ ಮಾಡುವಂತೆ ಚಾಲಕ ಯುವತಿ ಬಳಿ ವಿನಂತಿಸಿದ್ದಾನೆ. ಆದರೆ ಯುವತಿ, “ನನ್ನನ್ನು ವಿವಾಹವಾಗುವಂತೆ” ಆತನ ಬಳಿ ಕೇಳಿಕೊಂಡಿದ್ದಾಳೆ ಎನ್ನಲಾಗಿದೆ. ಆದರೆ ಈಗಾಗಲೇ ವಿವಾಹಿತನಾಗಿರುವ ಆ ವ್ಯಕ್ತಿ ಯುವತಿಯನ್ನು ವಿವಾಹವಾಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ..

ಈ ಹಿನ್ನೆಲೆ, ಯುವತಿ ಕಳೆದ ಎರಡು ದಿನಗಳ ಹಿಂದೆ
ಚಾಲಕನ ವಿರುದ್ಧ ದೂರು ನೀಡಲು ಮಂಕಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದೆ ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಲಾಗಿದೆ ಎನ್ನಲಾಗಿದೆ. ಇಂತಹ ಗಂಭೀರವಾಗಿರುವ ಪ್ರಕರಣದಲ್ಲಿ ದೂರು ನೀಡಲು ಬಂದ ಯುವತಿಗೆ ಬುದ್ದಿವಾದ ಹೇಳುವ ಬದಲು ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರೆ ಸುಮೋಟೋ (Suo Moto) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕಿತ್ತು. ಆದರೆ ಇನಾದ್ರೂ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಬೇಕಿದೆ..

ಇದನ್ನೂ ಓದಿ/ಮಹಿಳೆಯ ಕಣ್ಣೀರಿಗೆ ನ್ಯಾಯ : ಉಲ್ಲಾಸಗೆ  10ವರ್ಷ ಕಠಿಣ ಜೈಲು ಶಿಕ್ಷೆ