ಸುದ್ದಿಬಿಂದು ಬ್ಯೂರೋ‌ ವರದಿ
ಕಾರವಾರ: ಜೋಯಿಡಾ ತಾಲೂಕಿನ ಅಣಶಿ ಗ್ರಾಮದ ಕೈಲವಾಡಾ ಮಜರೆಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 2018ರಲ್ಲಿ ನಡೆದ ಮಹಿಳೆಯ ಮೇಲೆ ಬಲಾತ್ಕಾರ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಹತ್ತು  ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಆರೋಪಿ ಉಲ್ಲಾಸ ಸಡಕೋ ಗಾವಡಾ 2018ರ ಡಿಸೆಂಬರ್ 1ರಂದು  ದನಗಳನ್ನು ಮೇಯಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಆರೋಪಿ  ಹಠಾತ್ ಹಿಂಬದಿಯಿಂದ ದಾಳಿ ನಡೆಸಿ ಬೆದರಿಸಿ, ಕೈ–ಕುತ್ತಿಗೆಗಳನ್ನು ಉಗುರಿನಿಂದ ಪರಚಿ, ಕೂದಲು ಹಿಡಿದು ನೆಲಕ್ಕೆ ಹಾಕಿ ಬಲತ್ಕಾರ ಮಾಡಿರುವುದು  ಸಾಬೀತಾಗಿದೆ. ಆರೋಪಿ ಮಹಿಳೆಯ ಸೀರೆ ಹಾಗೂ ಒಳಉಡುಪುಗಳನ್ನು ಹರಿದು ಅವಮಾನಪಡಿಸಿ, ತನ್ನ ವಿರುದ್ಧ ದೂರು ನೀಡಿದರೆ ಜೀವದಿಂದ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಅಲ್ಲದೆ, ಕೃತ್ಯ ಮಾಡಿದ ದಿನ ಧರಿಸಿದ ಪ್ಯಾಂಟ್ ಮತ್ತು ಟಿ-ಶರ್ಟ್ ಅನ್ನು ತೊಳೆದು ಪುರಾವೆ ನಾಶಪಡಿಸಲು ಯತ್ನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ಭಾ.ದ.ಸಂ. ಕಲಂ 376, 354, 201, 506 ಅಡಿಯಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಿದ ಪಬ್ಲಿಕ್ ಪ್ರೋಸಿಕ್ಯೂಟರ್  ರಾಜೇಶ್ ಎಂ. ಮಳಗಿಕರ್ ಅವರು ಘಟನೆಯ ಗಂಭೀರತೆಯನ್ನು ಗಮನಕ್ಕೆ ತರಲು ಮತ್ತು ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗುವಂತೆ ಬಲವಾದ ವಾದ ಮಂಡಿಸಿದರು.

ಪ್ರಾಥಮಿಕ ತನಿಖೆಯನ್ನು ಮಾಜಿ ವೃತ್ತ ನಿರೀಕ್ಷಕ  ರಮೇಶ್ ಎಸ್. ಹೂಗಾರ, ಜೋಯಿಡಾ ವೃತ್ತ ಅವರು ಕೈಗೊಂಡು, ಪ್ರಕರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು, ಜೋಯಿಡಾ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ಗಳಾದ ಲಿಯಾಕತ್ ಅಲಿ ಮತ್ತು ಖಲೀಲ್ ಮುಲ್ಲಾ ಅವರು ಸಾಕ್ಷಿದಾರರನ್ನು ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿ, ಆರೋಪಿತನ ವಿರುದ್ಧ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ/ ಮುಂಡಗೋಡಕ್ಕೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ