ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಮಲವಡಿ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದ ರಸ್ತೆ ಅಪಘಾತ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ‌ ಮಾಡಿದೆ. ಟಿಪ್ಪರ್ ಲಾರಿ ಮತ್ತು ಸ್ಕೂಟಿಯ ನಡುವೆ ಡಿಕ್ಕಿ ಸಂಭವಿಸಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ದಾಂಡೇಲಿಯ ನವಗ್ರಾಮದ ನಾಗರಾಜ ಶಾಬಣ್ಣ ಕಾಂಬಳೆ ಟಿಪ್ಪರ್‌ನಲ್ಲಿ ಬೂದಿ ಸಾಗಿಸುತ್ತಿದ್ದಾಗ, ಎದುರಿನಿಂದ ಬಂದ ಮಲವಡಿಯ ಸುವರ್ಣ ಅಂತ್ರೋಳಕರ (30) ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿದ್ದ ಶೋಬಾ ಮಾರುತಿ ಕಶೀಲಕರ (38) ಹಾಗೂ ಅವರ ಮಕ್ಕಳಾದ ಆರುಶ (5) ಮತ್ತು ಗೋಕುಳ (3) ಕೂಡ ಸ್ಟೂಟಿಯಲ್ಲಿದ್ದರು.

ಭೀಕರವಾಗಿ ನಡೆದ ಅಪಘಾತ ಪರಿಣಾಮ ಸುವರ್ಣ ಅಂತ್ರೋಳಕರ ತಲೆಗೆ ಹಾಗೂ ಕೈಗೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶೋಬಾ ಮತ್ತು ಅವರ ಮಗ ಆರುಶ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಹಳಿಯಾಳ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ/ಹೆದ್ದಾರಿ ದಾಟುತ್ತಿದ್ದ ಪ್ರೇಮಕ್ಕನಿಗೆ ಅಪಘಾತ : ಕಾಲಿಗೆ ಗಂಭೀರ ಗಾಯ