ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿನ ಜಿಲ್ಲೆಯ ಘಟಕಗಳಲ್ಲಿ ಕೆಲ ಅಧ್ಯಕ್ಷರ ಬದಲಾವಣೆಯಾಗಬಹುದು ಎಂಬ ಮಾಹಿತಿ ಹಲವೆಡೆ ಚರ್ಚೆಯಾಗುತ್ತಿರುವ ನಡುವೆಯೇ, ಇದೀಗ “ಜಿಲ್ಲಾಧ್ಯಕ್ಷರ ಬದಲಾವಣೆಗೆ ಸದ್ಯ ಯಾವುದೇ ತೀರ್ಮಾನವಾಗಿಲ್ಲ ಎಂಬ ಮಾತು” ಕಾಂಗ್ರೇಸ್ ಮೂಲಗಳಿಂದಲೇ ಹೊರಬಿದ್ದಿದೆ.

ಕಳೆದ ಎರಡು ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಲವು ಜಿಲ್ಲಾಧ್ಯಕ್ಷರುಗಳು ಪಕ್ಷದ ಪರವಾಗಿ ಶ್ರಮಿಸಿ ಪಕ್ಷವನ್ನ ಅಧಿಕಾರಕ್ಕೆ ತಂದುಕೊಟ್ಟಿದ್ದಾರೆ. ಈ ನಾಯಕರ ನೇತೃತ್ವದಲ್ಲಿಯೇ ಚುನಾವಣೆ ನಡೆದಿದ್ದು, ಅದರ ಫಲವಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ. ಇಂತಹ ನಾಯಕರನ್ನು ಅಧಿಕಾರಕ್ಕೆ ಬಂದ ತಕ್ಷಣ ಬದಲಾಯಿಸುವುದರಿಂದ ಪಕ್ಷದೊಳಗೆ ಅಸಮಾಧಾನ, ಭಿನ್ನಮತ ಮತ್ತು ಸಂಘಟನೆಯ ಬಿಕ್ಕಟ್ಟು ಉಂಟಾಗುವ ಸಂಭವವಿದೆ.

ಪ್ರಸ್ತುತ ಜಿಲ್ಲೆ ಮಟ್ಟದಲ್ಲಿ ಯಾವುದೇ ತೀವ್ರ ಭಿನ್ನಮತಗಳು ಅಥವಾ ಸಂಘಟನೆಗೆ ತೊಂದರೆ ನೀಡುವ ಯಾವುದೆ ಲಕ್ಷಣಗಳು ಕಂಡುಬಂದಿಲ್ಲ. ಒಂದು ವೇಳೆ‌ ಆ ರೀತಿ ಇದ್ದರು ಕೂಡ, ಸಣ್ಣಪುಟ್ಟ ಅಸಮಧಾನಗಳನ್ನ ಪರಿಹರಿಸಿ ಪಕ್ಷ ಸಂಘಟನೆಯ ಬಲವರ್ಧನೆ ಮಾಡುವುದು ಸಾಧ್ಯವಿದೆ ಎಂಬ ನಿಲುವನ್ನ ಪಕ್ಷದ ಹೈಕಮಾಂಡ್ ಹೊಂದಿದೆ.

ಇದರೊಂದಿಗೆ, ಮುಖ್ಯಮಂತ್ರಿ ಬದಲಾವಣೆ, ಕೆಲ ಸಚಿವರ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವುದು ಅನಾವಶ್ಯಕ ತಾತ್ಕಾಲಿಕವಾಗಿ ಯಾವುದೇ ಬದಲಾವಣೆ ಕ್ರಮ ಕೈಗೊಳ್ಳುವುದಿಲ್ಲ ಎಂಬ ಚರ್ಚೆಗಳು ನಡೆಯುತ್ತಿರುವುದು ತಿಳಿದು ಬಂದಿದೆ.

ಪಕ್ಷದ ಮೂಲಗಳ ಪ್ರಕಾರ, ನವೆಂಬರ್ ತಿಂಗಳುವರೆಗೆ ಯಾವುದೇ ಸಚಿವರ ಬದಲಾವಣೆ ಅಥವಾ ಜಿಲ್ಲಾಧ್ಯಕ್ಷರ ಬದಲಾವಣೆಗಳು ನಡೆಯುವ ಸಾಧ್ಯತೆ ಇಲ್ಲ‌ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಗಳಲ್ಲಿ, ಹಾಲಿ ಸಚಿವರುಗಳು ಹಾಗೂ ಆಯಾ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು ತಮ್ಮ ಹಾಲಿ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ

ಇದನ್ನೂ ಓದಿ:ರಸ್ತೆ ಮೇಲೆ ಕೋಳಿ ತ್ಯಾಜ್ಯ ಎಸೆದ ಶಾಪ್‌ಗಳಿಗೆ ಪೊಲೀಸರಿಂದ ದಂಡ..!