ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನಾದ್ಯಂತ ನಿರಂತರವಾಗಿ‌‌ ಮಳೆ ಸುರಿಯುತ್ತಿದ್ದು, ಪರಿಣಾಮ‌‌ ಕುಮಟಾ ಶಿರಸಿ ಹೆದ್ದಾರಿಯ ದೇವಿ ಮನೆ ಘಟ್ಟದಲ್ಲಿ ತಡರಾತ್ರಿ ಮತ್ತೆ ಗುಡ್ಡ ಕುಸಿತ ಉಂಟಾಗಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ರಾತ್ರಿ ಸುಮಾರು 2-30ರ ಹೊತ್ತಿಗೆ ಗುಡ್ಡ ಕುಸಿತವಾಗಿದೆ. ಮಣ್ಣಿನ ಜೊತೆ ಕಲ್ಲು ಬಂಡೆಕಲ್ಲುಗಳು ಹೆದ್ದಾರಿಯಲ್ಲಿ ಉರುಳಿ ಬಿದ್ದಿದೆ. ಮೊನ್ನೆ ಗುರುವಾರ ಸಂಜೆ ಸಹ ಇದೇ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ನಿನ್ನೆ ಮಧ್ಯಾಹ್ನದ ವೇಳೆಗೆ ಹೆದ್ದಾರಿಯಲ್ಲಿ ಬಿದ್ದಿದ್ದ ಮಣ್ಣುಗಳನ್ನ ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ರಾತ್ರಿ ಸುರಿದ ಮಳೆಯಿಂದಾಗಿ ಮತ್ತೆ ಅದೆ ಸ್ಥಳದಲ್ಲಿ ಗುಡ್ಡಕುಸಿತ ಉಂಟಾಗಿದೆ.ಮಣ್ಣಿನ ಜೊತೆಯಲ್ಲಿ ದೊಡ್ಡ ದೊಡ್ಡ ಕಲ್ಲುಬಂಡೆಗಳು ಉರುಳಿ ಬಿದ್ದಿರುವುದರಿಂದ ಬ್ರೇಕರ್ ಮೂಲಕ ಕಲ್ಲು ಒಡೆಯ ಬೇಕಾಗಿರುವುದರಿಂದ ಕುಮಟಾ ಶಿರಸಿ ಹೆದ್ದಾರಿಯಲ್ಲಿ ಸದ್ಯ ಸಂಚಾರ ಕಷ್ಟವಾಗಲಿದೆ. ಈಗಾಗಲೇ‌‌ ಸ್ಥಳಕ್ಕೆ ಜೆಸಿಬಿ ಯಂತ್ರಗಳು ತೆರಳಿದ್ದು, ಮಣ್ಣು ತೆರವು ಕಾರ್ಯ ನಡೆಸಲಾಗತ್ತಿದೆ.

ಸುದ್ದಿಬಿಂದು ಓದುಗರಲ್ಲಿ ವಿನಂತಿ ಇದುವರೆಗೆ ತಾವೇಲ್ಲರೂ ಸುದ್ದಿಬಿಂದು ವೆಬ್ ನ್ಯೂಸ್‌ನ್ನು ಪ್ರೀತಿಯಿಂದ ಸ್ವೀಕರಿಸಿದ್ದಿರಿ. ಸದ್ಯ Broadcast‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕಾರಣ ಈ ಲಿಂಕ್ ಮೂಲಕ ಗ್ರೂಪ್ ಸೇರಿಕೊಳ್ಳುವ ಮೂಲಕ ಹಿಂದಿನಂತೆ ಸುದ್ದಿ ಓದು ಬಹುದಾಗಿದೆ  ವಾಟ್ಸಾಪ್ ಚಾನಲ್ ಸೇರಿಕೊಳ್ಳಬಹುದು..https://whatsapp.com/channel/0029VaAvVKA47Xe7I9bdgG31

ಇದನ್ನೂ ಓದಿ