ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ನಗರದ ಬಾಂಬೆಚಾಳ ಟೌನಶಿಪ್’ನಲ್ಲಿರುವ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಶವ ಭಾನುವಾರ ಪತ್ತೆಯಾಗಿದೆ.
ಸ್ಥಳೀಯ ನಿವಾಸಿ ಸುಧಾ ಗಣಪತಿ ವೆರ್ಣೇಕರ (58) ಎಂಬವರೇ ಮೃತಪಟ್ಟ ಮಹಿಳೆಯಾಗಿದ್ದಾರೆ. ಬಾಂಬೆಚಾಳ ಟೌನಶಿಪ್’ನಲ್ಲಿರುವ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಇಂದು ಇವರ ಮನೆಯ ಹತ್ತಿರ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದಾಗ, ಇವರು ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೃತರ ಅಣ್ಣನ ಮಗ ದಾಂಡೇಲಿ ನಗರ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಇದು ಸಹಜ ಸಾವು ಎಂಬ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ.
ಇದನ್ನೂ ಓದಿ
- Indian Navy Gets a Major Boost: Submarine Hunter INS Malvan Commissioned at Karwar
- ಭಾರತೀಯ ನೌಕಾಪಡೆಗೆ ಮತ್ತೊಂದು ಬಲ: ಕಾರವಾರದಲ್ಲಿ ಸಬ್ಮರಿನ್ ಹಂಟರ್ INS ಮಾಲ್ವಾಣ್ ಲೋಕಾರ್ಪಣೆ
- ಕದಂಬ ನೌಕಾನೆಲೆಯಲ್ಲಿ ಇಂದು ಸ್ವದೇಶಿ ಯುದ್ಧನೌಕೆ ‘ಮಾಲ್ವಾಣ್’ ಲೋಕಾರ್ಪಣೆ
- ಸಚಿವ ಸಂಪುಟ ವಿಸ್ತರಣೆ : ಹೈಕಮಾಂಡ್ ಕರೆಗಾಗಿ ಕಾಯುತ್ತಿದ್ದೇವೆ ಎಂದ ಸಿಎಂ ಡಿ.ಕೆ. ಶಿವಕುಮಾರ್

