ಅಂಕೋಲಾ: ಇಲ್ಲಿನ ಬಿಳಿಹೊಂಯ್ಗಿ ಗ್ರಾಮದಲ್ಲಿರುವ ಸ್ವಾತಂತ್ರö್ಯ ಕಾಲದ ಇತಿಹಾಸ ಇರುವ ಶ್ರೀ ಜಟಕ, ಮಹಾದೇವಿ, ನಾಗದೇವತೆ ದೇವಸ್ಥಾನದ ವರ್ಧಂತಿ ಉತ್ಸವ ಶುಕ್ರವಾರ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.

ಪ್ರಕೃತಿಯೇ ದೇವರು ಎನ್ನುವ ನಂಬಿಕೆಯಲ್ಲಿ ಕಳೆದ ವರ್ಷ ಇದೇ ದೇವಸ್ಥಾನದ ಪ್ರತಿಷ್ಠಾಪನೆಯಲ್ಲಿ ಭಕ್ತರಿಗೆ ಗಿಡವನ್ನೇ ಪ್ರಸಾದವಾಗಿ ವಿತರಣೆ ಮಾಡಲಾಗಿತ್ತು. ವರ್ದಂತಿ ಉತ್ಸವದಲ್ಲೂ ಗಿಡವನ್ನು ದೇವಸ್ಥಾನದ ಪ್ರಧಾನ ಬಾಗಿಲಲ್ಲಿ ಇಟ್ಟು ಪೂಜೆ ನೆರವೇರಿಸಲಾಯಿತು. ಬಳಿಕ ಅದನ್ನು ಅರ್ಚಕರಿಗೆ ಪ್ರಸಾದವಾಗಿ ಕೊಡಲಾಯಿತು. ಇದೊಂದು ಅಪರೂಪದ ಆಚರಣೆಯಾಗಿದೆ.

ವರ್ಧಂತಿ ಉತ್ಸವ:
ನೂತನ ದೇವಸ್ಥಾನ ನಿರ್ಮಾಣವಾಗಿ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಿತಿ ಪ್ರಕಾರಣ ಶುಕ್ರವಾರ ಶಾಸ್ತೊçÃಕ್ತವಾಗಿ ವರ್ಧಂತಿ ಉತ್ಸವ ನಡೆಯಿತು. ಬೆಳಗ್ಗೆ 10 ಗಂಟೆಯಿAದ ಶುರುವಾದ ಪೂಜಾ ಕಾರ್ಯಗಳು ಮಧ್ಯಾಹ್ನದ ವರೆಗೆ ನಡೆಯಿತು. ಹೋಮ ಸಂಪನ್ನಗೊAಡ ನಂತರ ಶ್ರಿ ಜಟಕ, ಮಹಾದೇವಿ, ನಾಗದೇವತೆ ಮಹಾ ಪೂಜೆ ಜರುಗಿತು. ಬಳಿಕ ಅನ್ನದಾನ ನಡೆಯಿತು.
ಶ್ರೀ ದೇವರ ಪೂಜಾ ಕಾರ್ಯದ ವೇಳೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು. ಜೈನ ತಾಂತ್ರಿಕ ಹಳದಿಪುರದ ಧರಣೇಂದ್ರ ಇಂದ್ರ ಅವರು ಧಾರ್ಮಿಕ ಪೂಜಾ ವಿಧಿ ವಿಧಾನ ನಡೆಸಿಕೊಟ್ಟರು. ದೇವಸ್ಥಾನದ ಅರ್ಚಕರಾದ ಶೇಷು ಗುನಗ, ರತ್ನಾಕರ ಗುನಗ ಇದ್ದರು.

ಶ್ರೀ ಕ್ಷೇತ್ರವು ಗಂಗಾವಳಿ ನದಿ ತೀರದಲ್ಲಿ ಇದೆ. ಇಲ್ಲಿನ ಕರಾವಳಿ ಭಾಗದಲ್ಲಿ ಜೈನ ಧರ್ಮದ ಪ್ರಭಾವ ಇರುವ ಹಲವು ದೇವಸ್ಥಾನಗಳು ಇವೆ. ಹಾಗಾಗಿ ಈ ದೇವಸ್ಥಾನ ಕೂಡ ಅತ್ಯಂತ ಹಳೆಯ ಇತಿಹಾಸ ಹೊಂದಿದೆ ಎಂದು ನಂಬಲಾಗಿದೆ. ಶ್ರೀ ಜಟಕ, ಮಹಾದೇವಿ, ನಾಗದೇವತೆ ದೇವಸ್ಥಾನವು ಧಾರ್ಮಿಕವಾಗಿ ಬಲಿಷ್ಠ ಶಕ್ತಿ ಹೊಂದಿದೆ ಎಂಬ ವಿಶ್ವಾಸ ಭಕ್ತರದ್ದು.

ದೇವಸ್ಥಾನ ಬಹಳ ವಿಶೇಷವಾಗಿದೆ
ವಿಶೇಷ ಸಂದರ್ಭದಲ್ಲಿ ಗಿಡ ಇಟ್ಟು ಪೂಜೆ ಮಾಡುವ ಬಿಳಿಹೊಂಯ್ಗಿಯ ಶ್ರೀ ಜಟಕ, ಮಹಾದೇವಿ, ನಾಗದೇವತೆ ದೇವಸ್ಥಾನ ಬಹಳ ವಿಶೇಷವಾಗಿದೆ. ಭಕ್ತರ ಎಲ್ಲ ಇಷ್ಟಾರ್ಥ ಸಿದ್ಧಿಸುವಷ್ಟು ಶಕ್ತಿ ಶ್ರೀ ಕ್ಷೇತ್ರದಲ್ಲಿದೆ.
ಧರಣೇಂದ್ರ ಇಂದ್ರ, ಜೈನ ತಾಂತ್ರಿಕ, ಹಳದಿಪುರ.