ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ವಾಹನವೊಂದರಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನ ಸಾಗಾಟ ಮಾಡುತ್ತಿದ್ದ ವೇಳೆ ಶಿರಾಲಿ ಚೆಕ್ ಪೊಸ್ಟ್ ಬಳಿ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಗಳು ಹಾವೇರಿ ಮೂಲದ
ಚೇತನ ನಂದೀಶ ಕಡ್ಲಿ, ಸಂತೋಷ ಧ್ಯಾನಪ್ಪ ಬೋರದ್ ಹಾಗೂ ಗದಗ ನಿವಾಸಿಯಾಗಿರುವ ದುರ್ಗಪ್ಪ ಫಕ್ಕೀರಪ್ಪ ಛಲವಾದಿ ಎಂದು ಗುರುತಿಸಲಾಗಿದೆ..ಬಂಧಿತ ಆರೋಪಿಗಳು ಅಕ್ರಮ‌ ಜಾನುವಾರುಗಳನ್ನ ಹೊನ್ನಾವರ ಕಡೆಯಿಂದ ಭಟ್ಕಳದ ಕಡೆಗೆ ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದು, ಈ ವೇಳೆ ಪೊಲೀಸರು ತಪಾಸಣೆ ಮಾಡುವ ಸಮಯದಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾರೆ.

ಶಿರಾಲಿ ಚೆಕ್‌ಪೋಸ್ಟ್ ನಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ ಭರಮಪ್ಪ ಬೆಳಗಲಿ ವಾಹನ ಸಮೇತ ವಶಕ್ಕೆ ಪಡೆದು ಸುಮಾರು 5.70,000, ಲಕ್ಷ ಮೌಲ್ಯದ19 ಜಾನುವಾರುಗಳನ್ನು ರಕ್ಷಿಸಿದ್ದಾರೆ..

ಇದನ್ನೂ ಓದಿ