ಸುದ್ದಿಬಿಂದು ಬ್ಯೂರೊ ವರದಿ
ಭಟ್ಕಳ : ರಸ್ತೆಯಲ್ಲಿ ಸಿಕ್ಕಿದ್ದ 20ಲಕ್ಷ ಮೌಲ್ಯದ ಬಂಗಾರದ ಆಭರಣವನ್ನ ಪ್ರಮಾಣಿಕವಾಗಿ ಪಿಎಸ್ಐ ನವೀನ್ಕುಮಾರ ಮೂಲಕ ಬಂಗಾರ ಕಳೆದುಕೊಂಡ ಮಹಿಳೆಗೆ ವಾಪಸ್ ನೀಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ಏ 22ರಂದು ಸಾಯಂಕಾಲ 4:30 ಗಂಟೆಗೆ ಸುಮಾರಿಗೆ ಫಾತಿಮಾ ಕೌಸರ್ ,ನಿಸಾರ್ ಅಹಮದ್ ರುಕ್ಮುದ್ದೀನ್, ಸುಲ್ತಾನ್ ರೋಡ್, ಸುಲ್ತಾನ್ ಮಸೀದಿ ಹತ್ತಿರ ಭಟ್ಕಳ, ಅರವರು ತಮ್ಮ ವಾಸದ ಮನೆಯನ್ನು ಬೇರೆ ಕಡೆ ಶಿಫ್ಟ್ ಮಾಡಲು ಮನೆಯ ಸಾಮಾಗ್ರಿಗಳಲ್ಲಿ ಇಟ್ಟಂತಹ ಸುಮಾರು 20 ಲಕ್ಷದ ಬಂಗಾರದ ಆಭರಣಗಳ ಹ್ಯಾಂಡ್ ಬ್ಯಾಗ್ ರಸ್ತೆ ಮಧ್ಯದಲ್ಲಿ ಕಳೆದು ಹೋಗಿತ್ತು,
ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದಂತಹ ಹುಸೇನ್ ಶೇಕ್ ಹಸನ್ ಜಾಫರ್ ಶೇಕ್ , ನಾಗಪ್ಪ ನಾಯಕ್ ರಸ್ತೆ ಭಟ್ಕಳ ಅವರಿಗೆ ಸಿಕ್ಕಿದ್ದು, ಅವರು ಅವರು ಸಾಯಿಲ್ ಆನ್ಲೈನ್ ಮಾಧ್ಯಮದವರಿಗೆ ಕರೆ ಮಾಡಿ ತಿಳಿಸಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ಬಂದು ಪ್ರಾಮಾಣಿಕತೆಯಿಂದ ಸುಮಾರು 20 ಲಕ್ಷದ ಬಂಗಾರದ ಆಭರಣಗಳನ್ನು ಕಳೆದುಕೊಂಡ ಮಹಿಳೆಗೆ ಪಿಎಸ್ಐ ನವೀನ್ ಎಸ್ ನಾಯ್ಕ,ಹಾಗೂ ಎ ಎಸ್ ಐ ರವಿ ನಾಯ್ಕ್ ಇವರ ಸಮ್ಮುಖದಲ್ಲಿ ವಾಪಸ್ ನೀಡಿರುತ್ತಾರೆ.
ಇದನ್ನೂ ಓದಿ
- ಮೂರು ವರ್ಷದಲ್ಲೇ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ ಮಂಕಾಳ್ ವೈದ್ಯ
- ಮೊರಬಾದಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಮನೆ ಜಖಂ: ಪ್ರಾಣಾಪಾಯದಿಂದ ಪಾರು
- ಕರಾವಳಿಯ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ: ಡಿಕೆಶಿ ಸಚಿವ ಸಂಪುಟದಲ್ಲಿ ಮಾಂಕಾಳ ವೈದ್ಯರಿಗೆ ಹೊಸ ಜವಾಬ್ದಾರಿ..!
- 11 ಮಂದಿಯ ದುರಂತದ ಸೂತಕದಲ್ಲೂ ಬಿಜೆಪಿ ರಾಜಕೀಯ; ಕಾಂಗ್ರೇಸ ಜಿಲ್ಲಾ ವಕ್ತಾರ ಪ್ರಸನ್ನ ನಾಯ್ಕ ಆಕ್ರೋಶ

