ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ:ಶಿವಮೊಗ್ಗ, ಬೀದರ ಮತ್ತು ಇತರ ಜಿಲ್ಲೆಗಳಲ್ಲಿ ನಡೆದ ಜನಿವಾರದ ಪ್ರಕರಣವನ್ನ ಖಂಡಿಸಿರುವ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಸಂವಿಧಾನದ ಆಶಯಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ಅರಿತು ನಡೆಯಬೇಕು,ಧಾರ್ಮಿಕ ಸಂಪ್ರದಾಯಗಳಿಗೆ ಧಕ್ಕೆ ತರುವುದು ಸರಿಯಲ್ಲ ಎಂದಿದ್ದಾರೆ.
ಸಂವಿಧಾನ ದೇಶದ ಸಮಸ್ತ ಧರ್ಮಗಳಿಗೂ ಸಮಾನ ಹಕ್ಕು ನೀಡಿದೆ,ಎಲ್ಲಾ ಧರ್ಮಗಳ ಧಾರ್ಮಿಕ ಹಕ್ಕನ್ನು ಗೌರವಿಸುವುದು ಭಾರತೀಯ ನಾಗರಿಕರ ಆದ್ಯ ಕರ್ತ್ಯವ್ಯವು ಹೌದು.ನಾನು ಈ ಪ್ರಕರಣವನ್ನು ಅತ್ಯಂತ ಬಲವಾಗಿ ಖಂಡಿಸುತ್ತೇನೆ,ಮಾನವೀಯ ಗುಣಗಳು ಮತ್ತು ನಾಗರಿಕತೆಯನ್ನು ಮರೆತು ವರ್ತಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಇನ್ನು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
ಘಟನೆ ನಡೆದ ಮಾಹಿತಿ ಬಂದ ತಕ್ಷಣ ಸಂಬಂಧ ಪಟ್ಟ ಜಿಲ್ಲೆಗಳ ಸಚಿವರೊಂದಿಗೆ ಮಾತನಾಡಿದ್ದೇನೆ, ಸಚಿವರು ಭರವಸೆ ನೀಡಿದಂತೆ ಕ್ರಮ ಕೈಗೊಂಡಿದ್ದಾರೆ,ರಾಜ್ಯದಲ್ಲಿನ ನಮ್ಮ ಸರ್ಕಾರ ಎಲ್ಲಾ ಜಾತಿ ಮತ್ತು ಧರ್ಮಗಳನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ, ಕೆಲವು ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿ ವರ್ತಿಸಿ ಇಂತಹ ದುಶ್ಕೃತ್ಯವನ್ನು ಮೆರೆಯುತ್ತಿದ್ದಾರೆ, ಈ ಪ್ರಕರಣದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವ ಮುಖಾಂತರ ಮುಂದೆ ಈ ರೀತಿಯ ಕೃತ್ಯಗಳು ನಡೆಯದಂತೆ ಎಚ್ಚರಿಕೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.
ಇದನ್ನೂ ಓದಿ
- Ramalinga-reddy-resigns/ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ
- ಓಮ್ಮಿ ಚಾಲಕನ ಎಡವಟ್ಟು: ಒಂದೇ ಕುಟುಂಬದ ಮೂವರ ಸಾವು
- ಕೇರಳಕ್ಕೆ ಮುಂಗಾರು ಎಂಟ್ರಿ : ಕರ್ನಾಟಕದತ್ತ ಮುಂಗಾರಿನ ಹೆಜ್ಜೆ; ಕಾರವಾರದಲ್ಲಿಯೂ ಅಬ್ಬರಿಸುತ್ತಿರುವ ವರುಣ
- ಜಿಲ್ಲಾ ಆಸ್ಪತ್ರೆ ಶಿರಸಿಗೆ ಸ್ಥಳಾಂತರಕ್ಕೆ ವಿರೋಧ: ಕಾರವಾರದಲ್ಲೇ ಉಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ :ಮಾಧವ ನಾಯ್ಕ

