ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳಿಂದ ಸೈಲೆಂಟ್ ಆಗಿದ್ದ ಗೋ ಕಳ್ಳರು ಮತ್ತೆ ಆಕ್ಟಿವ್ ಆಗಿದ್ದು,ರಾತ್ರಿ ವೇಳೆ ಐಷಾರಾಮಿ ಕಾರನಲ್ಲಿ ಜಾನುವಾರು ಹಿಡಿದು ಸಾಗಾಟ ಮಾಡುತ್ತಿದ್ದಾರೆ.‌ ಗುರುವಾರ ತಡ ರಾತ್ರಿ‌ ಕುಮಟಾ ತಾಲೂಕಿನ‌ ಬರ್ಗಿಯಲ್ಲಿ ಜಾನುವಾರು ಕಳ್ಳತನವಾಗಿದೆ.

ಬರ್ಗಿಯ ಮಹಾಲಿಂಗೇಶ್ವರ ಎದುರಿನ ರಸ್ತೆಯಲ್ಲಿ ರಾತ್ರಿ ವೇಳೆ ಮಲಗಿದ್ದ ಜಾನುವಾರುಗಳನ್ನ ಇನೋವಾ ಕಾರನಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಬಂದ ನಾಲ್ವರು ಡಕಾಯಿತರು ಸ್ಥಳೀಯರು ಕೂಗಾಡಿದರು ಮಾರಕಾಸ್ತ್ರವನ್ನ ತೋರಿಸಿ ಭಯಹುಟ್ಟಿಸಿ ಜಾನುವಾರುಗಳನ್ನ ಹಿಡಿದು ಸಾಗಿದ್ದಾರೆ.ಸದ್ಯ ಈ ಕೃತ್ಯ ಅಕ್ಕ-ಪಕ್ಕದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರಬಹುವುದು ಎಂದು ಉಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಬೇರೆ ಬೇರೆ ಅಪರಾಧ ಪ್ರಕರಣವನ್ನ ಭೇದಿಸುವ ಪೊಲಿಸರಿಗೆ ಈ ರೀತಿ ರಾತ್ರಿ ವೇಳೆ ಜಾನುವಾರು ಕಳ್ಳತನ ಮಾಡುವವರನ್ನ ಸದೆಬಡಿಯಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹೊನ್ನಾವರ ಭಾಗದಲ್ಲಿ ಗರ್ಭದ ಗೋ ಹತ್ಯೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಗೋ ಹತ್ಯೆ ಹಾಗೂ ಗೋಕಳ್ಳರು ಸಿಕ್ಕರೆ ಗುಂಡಿಕ್ಕಿ ಹೊಡೆಯಬೇಕು ಎಂಬ ಹೇಳಿಯಿಂದ ಗೋಕಳ್ಳರು ಕೆಲ ತಿಂಗಳಿಂದ ಬಿಲ ಸೇರಿಕೊಂಡತ್ತಿತ್ತು. ಆದರೆ ಇದೀಗ ಮತ್ತೆ ಗೋಕಳ್ಳರು ಬಾಲ ಬಿಚ್ಚಿದ್ದು,ನಿಧಾನವಾಗಿ ತಮ್ಮ ಹಳೆ ಚಾಳಿಯನ್ನ ಮುಂದುವರೆಸಿದ್ದಾರೆ.

ರಾತ್ರಿ ವೇಳೆ ಹೆದ್ದಾರಿಯಲ್ಲಿ ಪೊಲೀಸ್ ತಪಾಷಣೆ ನಿಷ್ಕ್ರೀಯವಾಗಿರುತ್ತದೆಯೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.ಸಣ್ಣ ಸಣ್ಣ ವಾಹನಗಳಲ್ಲಿ ನಾಲ್ಕೈದು ಜಾನುವಾರುಗಳನ್ನ ಹಿಂಸಾತ್ಮಕವಾಗಿ ತುಂಬಿ ಸಾಗಿಸುತ್ತಿದ್ದರು.‌ಅದು ರಾತ್ರಿ ಪಾಳೆಯದಲ್ಲಿರುವ ಪೊಲೀಸರಿಗೆ ಕಾಣಸಿಗದಂತಾಗಿದೆ. ಇನ್ನೂ ಬೇರೆ ಬೇರೆ ಜಿಲ್ಲೆಗಳಿಂದ ಅಕ್ರಮವಾಗಿ ಸಾಗಾಟವಾಗುವ ಜಾನುವಾರು ತುಂಬಿದ ವಾಹನಗಳೆ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿವೆ.

ಆದರೆ ಸ್ಥಳೀಯವಾಗಿ ಜಾನುವಾರು ಕಳ್ಳತನ ಮಾಡಿ ಸಾಗಾಟ ಮಾಡುವ ವಾಹನಗಳು ಅಷ್ಟಾಗಿ ಪೊಲೀಸರ ಕೈಗೆ ಸಿಗುತ್ತಿಲ್ಲ.ಪ್ರತಿನಿತ್ಯವೂ ಜಿಲ್ಲೆಯ ಒಂದಲ್ಲಾ ಒಂದು ಕಡೆ ಗೋ ಕಳ್ಳತನ ಆಗುತ್ತಿರುವುದು ಕೇಳಿ ಬರುತ್ತಿದೆ.ಆದರೆ ಅದು ಯಾವುದು ಪತ್ತೆಯಾಗುತ್ತಿಲ್ಲವೆಂದು ಗೋ ಪ್ರೇಮಿಗಳು ಆಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ