ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ :- ಸ್ಥಳೀಯ ಆಧಾರ ಸಂಸ್ಥೆಯ ಆಶ್ರಯದಲ್ಲಿ ಪತ್ರಕರ್ತ ದಿ| ಶಿವಶಂಕರ್ ಕೋಲಶಿರ್ಸಿ ಅವರ ನೆನಪಿನ ಮಕ್ಕಳ ಬೇಸಿಗೆ ಶಿಬಿರ “ಕಲರವ -2025” ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ತಾಲೂಕಿನ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರವು ಏಪ್ರಿಲ್ 11 ರಿಂದ 20 ರವರೆಗೆ ಜರುಗಲಿದೆ.
ಹತ್ತು ದಿನಗಳ ಕಾಲ ಜರುಗುವ ಈ ಶಿಬಿರದಲ್ಲಿ 6 ರಿಂದ 14 ವರ್ಷದ ವಯೋಮಿತಿಯ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಶಿಬಿರವು ಪ್ರತಿ ದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿದೆ. ಶಿಬಿರದಲ್ಲಿ ಸಂಗೀತ, ಚಿತ್ರಕಲೆ, ಕ್ಲೇ ಮಾಡಲಿಂಗ್, ಕರಾಟೆ, ಬರವಣಿಗೆ, ಜಾನಪದ ಕಲೆ, ಯೋಗಾಸನ, ಮೊದಲಾದ ವಿಷಯಗಳ ಕುರಿತು ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ಅಲ್ಲದೆ ಬುದ್ಧಿಮತ್ತೆ ಹೆಚ್ಚಿಸುವ ಚಟುವಟಿಕೆಗಳು ಹಾಗೂ ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ಗಳನ್ನು ನಡೆಸಲಾಗುವುದು.
ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಆಧಾರ ಸಂಸ್ಥೆಯ ಸಂಯೋಜಕರಾದ ಸುರೇಶ ಕಡಕೇರಿ 9945774548, ಶಿಬಿರದ ಸಂಯೋಜಕ ರಾದ ಪ್ರಶಾಂತ ಡಿ ಶೇಟ್ 9448347570 ಇವರನ್ನು ಸಂಪರ್ಕಿಸಬಹುದಾಗಿದೆ. ಮೊದಲ ಹೆಸರು ನೊಂದಾಯಿಸಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು..
ಇದನ್ನೂ ಓದಿ