ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ : ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ನೀಡಲಾಗುವ ಪೌಷ್ಟಿಕ ಆಹಾರದ ಪ್ಯಾಕೆಟ್ ಮತ್ತು ಹಾಲಿನ ಪೌಡರ್ ಪ್ಯಾಕೆಟ್’ಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಿದ್ದು, ಇನ್ನೋರ್ವ ಕಾಂಗ್ರೇಸ್ ಮುಖಂಡ‌‌‌ ಪಾರಿಯಾಗಿರುವ ಘಟನೆ ಬಿ.ಕೆ ಹಳ್ಳಿಯಲ್ಲಿ‌ ನಡೆದಿದೆ.

ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ನೀಡಲಾಗುವ‌ ಲಕ್ಷಾಂತರ ರೂಪಾಯಿ ಬೆಲೆಯ ಪೌಷ್ಟಿಕ ಆಹಾರ‌ ಪ್ಯಾಕೇಟ್ ಹಾಗೂ ಹಾಲಿನ ಪೌಡರ್‌ ಕಳ್ಳತ‌ನ ಮಾಡಿ ದನದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು.‌‌ಇದಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿತ್ತು..

ಪ್ರಕರಣಕ್ಕೆ‌ ಸಂಬಂಧಿಸಿ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಕಾವಲವಾಡದ ನಿವಾಸಿ ವಿಷ್ಣು ಮಿಶಾಳಿ ಮತ್ತು ಬಿ.ಕೆ ಹಳ್ಳಿಯ ಸಹದೇವ ರುದ್ರಪ್ಪ ಗೌಡ ಇಬ್ಬರು ಸೇರಿಕೊಂಡು ಕರ್ನಾಟಕ ಸರಕಾರದಿಂದ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಪೂರೈಕೆಯಾಗುವ ಹಾಲಿನ‌ ಪುಡಿ ಮತ್ತು ಪುಷ್ಟಿ ಪುಡಿಗಳ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಖರೀದಿ ಮಾಡಿಕೊಂಡು, ಕೆಎ: 65/0057 ನೋಂದಣಿ ಸಂಖ್ಯೆಯ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಸಾಗಾಟ ಮಾಡಲಾಗಿತ್ತು.

ಹಳಿಯಾಳ ಪಟ್ಟಣದ ದೇಶಪಾಂಡೆ ನಗರದ ಚಾಲಕ ಲಕ್ಷ್ಮಣ ನಾಗಪ್ಪ ಹುನಗುಂದ ಎಂಬಾತ ಯಾವುದೇ ಪಾಸ್ ಅಥವಾ ಪರವಾನಿಗೆಯನ್ನು ಪಡೆದುಕೊಳ್ಳದೆ ಸಾಗಾಟ ಮಾಡಿಕೊಂಡು ಬಂದು ಬಿ.ಕೆ ಹಳ್ಳಿಯ ಸಹದೇವ ರುದ್ರಪ್ಪಗೌಡ ಅವರ ದನದ ಕೊಟ್ಟಿಗೆಯಲ್ಲಿ ಅಕ್ರಮ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡುವ ಸಮಯದಲ್ಲಿ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ ಹಾಗೂ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ಮತ್ತು ಪೊಲೀಸರ ತಂಡ ದಾಳಿ ನಮಾಡಿದೆ.

ದಾಳಿಯ ಸಂದರ್ಭದಲ್ಲಿ ಹಾಲಿನ ಪುಡಿ ತುಂಬಿದ 35 ಚೀಲಗಳು 1270.7 ಕೆಜಿ, ಅಂದಾಜು ಇದರ ಮೌಲ್ಯ ರೂ.1,52,400, ಅಂಗನವಾಡಿ ಮಕ್ಕಳಿಗೆ ಪೂರೈಕೆಯಾಗುವ ಪುಷ್ಠಿ ಅಂತ ಹೆಸರಿರುವ 205.4 ಕೆ.ಜಿ ತೂಕವನ್ನು ಹೊಂದಿರುವ 79 ಪ್ಯಾಕೆಟ್ ಗಳು ರೂ.20,500 ಅಂದಾಜು ಮೌಲ್ಯದ ಸ್ವತ್ತುಗಳೊಂದಿಗೆ ಸಿಕ್ಕಿದ್ದರಿಂದ ಮೂವರ ಮೇಲೆ ದೂರನ್ನು ದಾಖಲಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಷ್ಣು ವಿಶಾಳಿ ಈತ ಪರಾರಿಯಾಗಿದ್ದು, ಬಿ.ಕೆ.ಹಳ್ಳಿಯ ಸಹದೇವ ರುದ್ರಪ್ಪ ಗೌಡ ಮತ್ತು ಪಟ್ಟಣದ ದೇಶಪಾಂಡೆ ನಗರದ ನಿವಾಸಿ ಲಕ್ಷ್ಮಣ ನಾಗಪ್ಪ ಹುನಗಂದ ಇವರನ್ನು ಬಂದಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಅಂಗನವಾಡಿಗಳಿಗೆ ಆಹಾರ ವಸ್ತುಗಳ ಪೂರೈಕೆಯನ್ನು ಗುತ್ತಿಗೆ ಪಡೆದಿರುವ,

ಕಾಂಗ್ರೆಸ್ ಮುಖಂಡ ಹಾಗೂ ಕಾವಲವಾಡ ಸಹಕಾರಿ ಸಂಘದ ಅಧ್ಯಕ್ಷನಾಗಿರುವ ವಿಷ್ಣು ಮಿಶಾಳಿ ಈತನ ಬಂಧನಕ್ಕಾಗಿ ಸಿಪಿಐ ಜೈಪಾಲ್ ಪಾಟೀಲ್ ಅವರ ನೇತೃತ್ವದಲ್ಲಿ ಪಿಎಸ್ಐ ವಿನೋದ್ ರೆಡ್ಡಿ ಅವರು ಬಲೆ ಬೀಸಿದ್ದಾರೆ. ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಸಂಚಲನ ಮೂಡಿಸಿದ್ದ ಪ್ರಕರಣ ಇದಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆಯಾದರೇ ಮತ್ತಷ್ಟು ಕರ್ಮಕಾಂಡ ಹೊರಬೀಳಲಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಆಹಾರ ನಿರೀಕ್ಷಕರಾದ ಸಂತೋಷ್ ಶಿವಾಜಿ ತೋಂಡಲೆ ಅವರು ಹಳಿಯಾಳ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಇದನ್ನೂ ಓದಿ