ಸುದ್ದಿಬಿಂದು ಬ್ಯೂರೋ‌ ವರದಿ
ಹೊನ್ನಾವರ : ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಅಪಘಾತ ಉಂಟಾಗಿ ಬಸ್‌ನಲ್ಲಿದ್ದ ನಾಲ್ಕೈದು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಹಿಮೆ ಕ್ರಾಸ್ ಬಳಿ ನಡೆದಿದೆ.

ಧರ್ಮಸ್ಥಳದಿಂದ ಹುಬ್ಬಳ್ಳಿಗೆ ಹಾಗೂ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಬಸ್ ನಡುವೆ ಅಪಘಾತ ಉಂಟಾಗಿದೆ. ಅಪಘಾತದಿಂದಾಗಿ ಬಸ್ ಹೆದ್ದಾರಿ ಪಕ್ಕಕ್ಕೆ ಇಳಿದೆ. ಅಪಘಾತದಿಂದಾಗಿ ಬಸ್‌ನಲ್ಲಿದ್ದ ನಾಲ್ಕು ಮಂದಿ ಪ್ರಯಾಣಿಕರಿಗೆ ಗಾಯವಾಗಿದ್ದು, ತಕ್ಷಣ ಅವರನ್ನ 108 ವಾಹನದ ಮೂಲಕ‌ EMT ಗಜಲಕ್ಷ್ಮಿ ಹಾಗೂ ಫೈಲೇಟ್‌ ಗೋಪಾಲ ನಾಯ್ಕ ಅವರು ಗಾಯಗೊಂಡ ಪ್ರಯಾಣಿಕರನ್ನ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊನ್ನಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ..

ಇದನ್ನೂ ಓದಿ