ಸುದ್ದಿಬಿಂದು ಬ್ಯೂರೋ ವರದಿ: Suddibindu Digital News:ಚಿತ್ರದುರ್ಗ ನಗರದ ಐಶ್ವರ್ಯ ಪೋರ್ಟ್ ಬಳಿ ರಾತ್ರಿ ವೇಳೆ ಮಧುಗಿರಿ ಬಿಜೆಪಿ ಅಧ್ಯಕ್ಷ ಹಾಗೂ ಚಿತ್ರದುರ್ಗ ಪಿಎಸ್ಐ ನಡುವೆ ಮಾರಾಮಾರಿ ಉಂಟಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಬಿಜೆಪಿ ಅಧ್ಯಕ್ಷ ಹನುಮಂತ್ ಗೌಡ ಹಾಗೂ ಚಿತ್ರದುರ್ಗ ಪಿಎಸ್ಐ ಗಾದ್ರಿ ಲಿಂಗಪ್ಪನವರ ನಡುವೆ ಮಾರಮಾರಿ ನಡೆದಿದೆ..‌ಮಧುಗಿರಿಯ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತ್ ಗೌಡ ಅವರು ರಾತ್ರಿ ಐಶ್ವರ್ಯ ಪೋರ್ಟ್ ನಲ್ಲಿ ಊಟ ಮಾಡಲು ಬಂದಾಗ ಈ ಒಂದು ಘಟನೆ ನಡೆದಿದ್ದು ಇಬ್ಬರ ನಡುವೆ ಮಾತಿನ ಮಾತು ಬೆಳೆದು ಕೈ ಕೈ ಮಿಲಾಸಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಈ ವಿಚಾರವನ್ನು ತಿಳಿದ ಬಿಜೆಪಿ ಮಾಜಿ ಶಾಸಕ ಜಿಎಸ್ ತಿಪ್ಪಾರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಶಾಸಕ ತಿಪ್ಪಾರೆಡ್ಡಿ ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಅವರು ಬಿಜೆಪಿ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಇದರ ನಡುವೆ ಚಿತ್ರದುರ್ಗದಲ್ಲಿ ಕೆಲಸದ ನಿಮಿತ್ತ ಬಂದಿದ್ದು ರಾತ್ರಿ ಐಶ್ವರ್ಯ ಪೋರ್ಟ್ ನಲ್ಲಿ ಊಟ ಮುಗಿಸಿ ಹೊರಗಡೆ ಬಂದು ನಿಂತಾಗ ಅಲ್ಲಿಗೆ ಬಂದ ಪಿಎಸ್ಐ ಗಾದಿಲಿಂಗಪ್ಪನವರ ಹನುಮಂತೇಗೌಡ ಅವರನ್ನ ಏಕವಚನದಲ್ಲಿ ಮಾತನಾಡಿಸಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಮಾತಿಗೆ ಮತು ಬೆಳೆದು ಕೈ ಕೈ ವಿಲಾಸಿದ್ದಾರೆ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವನ್ನು ಜರುಗಿಸಬೇಕು, ಪಕ್ಷದ ಕಾರ್ಯಕರ್ತನ ಮೇಲೆ ಆದ ಅವಮಾನವನ್ನ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ