ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ತಮ್ಮ ಜನ್ಮದಿನದ ಅಂಗವಾಗಿ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಕಾಳಜಿಯ ಮೆರೆದಿದ್ದಾರೆ.

ಜನ್ಮದಿನದ ಶುಭಾಶಯ ಕೋರಲು ಆಗಮಿಸಿದ ಸಾರ್ವಜನಿಕರಿಗೆ, ಪಕ್ಷದ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಹಾಗೂ ಗಣ್ಯರಿಗೆ ವಿವಿಧ ಜಾತಿಯ ಉಪಯುಕ್ತ ಹಣ್ಣು ಹಾಗೂ ಔಷಧೀಯ ಸಸಿಗಳನ್ನು ವಿತರಿಸಿದರು. ಮಾವು, ಹಲಸು, ನೇರಳೆ, ಗೋಡಂಬಿ, ನೆಲ್ಲಿ ಸೇರಿದಂತೆ ವಿವಿಧ ಸಸಿಗಳನ್ನು ವಿತರಿಸಿ, ಅವುಗಳನ್ನು ನೆಟ್ಟು ಬೆಳೆಸುವಂತೆ ಕರೆ ನೀಡಿದರು. ಜನ್ಮದಿನದ ಆಚರಣೆಯನ್ನು ಪರಿಸರ ಸಂರಕ್ಷಣೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ರೂಪಾಲಿ ನಾಯ್ಕ ಅವರು ಪರಿಸರದ ಮೇಲಿನ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ರವಿರಾಜ ಅಂಕೋಲೆಕರ, ಶಿಲ್ಪಾ ನಾಯ್ಕ, ಅಭಿಷೇಕ ಹರಿಕಂತ್ರ, ಅಮಿತ ನಾಯ್ಕ, ಅಜಯ ಜೋಶಿ, ಸುನೀಲ ಮಾಳಸೇಕರ, ಸೂರಜ ಗಾಂವಕರ, ರೋಶನ್ ನಾಯ್ಕ, ಗುರುದಾಸ ಜೋಪ್ರೇಕರ, ಸೂರಜ ಗುನಗಿ, ಸುಶಾಂತ ಪೆಡ್ನೇಕರ, ಪ್ರತಾಪ್, ಪ್ರೀತಮ್, ರತನ್ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ/ಮಹಿಳಾ PSI ಆಶ್ಲೀಲ ವಿಡಿಯೋ ವೈರಲ್‌ : ಜೈಲಿನಲ್ಲಿ ಕೈದಿ-ಮಹಿಳಾ ಪಿಎಸ್‌ಐ ನಂಟು