ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಮೀನುಗಾರಿಕೆ ತೆರಳಿದ್ದ ವ್ಯಕ್ತಿ ಓರ್ವ ಮೀನುಗಾರಿಕೆಗಾಗಿ ದೋಣಿಯಲ್ಲಿ ತೆರಳಿದ ವೇಳೆ ದೋಣಿ ಪಲ್ಟಿಯಾಗಿ ನೀರಿನಲ್ಲಿ ಮುಳುಗಡೆಯಾಗಿ ಮೀನುಗಾರ ಮೃತಪಟ್ಟಿರುವ ಘಟನೆ ಹಾರವಾಡದಲ್ಲಿ ನಡೆದಿದೆ.‌

ಘಟನೆಯಲ್ಲಿ ಹಾರವಾಡ ಗಬಿತ್‌ವಾಡ ಗ್ರಾಮದ ನಿವಾಸಿಯಾಗಿರುವ ಸಹದೇವ (ರಾಜೇಶ್) ಮೆಥಾ (50) ಎಂಬಾತನೆ ದೋಣಿ ದುರಂತದಲ್ಲಿ ಮೃತಪಟ್ಟಿರುವ ಮೀನುಗಾರನಾಗಿದ್ದಾನೆ.

ಮೀನುಗಾರಿಕೆಯನ್ನು ನಂಬಿಕೊಂಡೇ ಜೀವನ ಸಾಗಿಸುತ್ತಿದ್ದ ಸಹದೇವ ಎಂದಿನಂತೆ ‘ಶ್ರೀ ಮಾತಾ ಭವಾನಿ’ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿ ಅಪಘಾತಕ್ಕೀಡಾಗಿ ಮುಳುಗಿದ ಪರಿಣಾಮ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಮೀನುಗಾರರು ಕಾರ್ಯಾಚರಣೆ ನಡೆಸಿ ಅವರನ್ನು ದಡಕ್ಕೆ ಕರೆತಂದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಈ ಬಗ್ಗೆ ಸರಕಾರ ತಕ್ಷಣ ಪರಿಹಾರ ನೀಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ/ನುಶಿಕೋಟೆ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಗಲಾಟೆ : ಭಟ್ಕಳದ ಯುವಕ ಸಾವು