ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ತಾಲೂಕಿನ ಅಪ್ಸರಕೊಂಡ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪರಿಚಿತ ವಾಹನ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. (Honnavar accident | NH66 crash | Karnataka road accident)

ಅಪಘಾತದಲ್ಲಿ ಕಿರಣ ಬಾಲಚಂದ್ರ ನಾಯ್ಕ (25) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈತ ಹೊನ್ನಾವರ ತಾಲೂಕಿನ ಕೆಳಗಿ ಇಡಗುಂಜಿ ನಿವಾಸಿಯಾಗಿದ್ದು, ಹೊನ್ನಾವರದಲ್ಲಿರುವ ತನ್ನ ಸ್ನೇಹಿತನ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನ ಮನೆಗೆ ಬರುತ್ತಿದ್ದ ವೇಳೆ ದುರ್ಗಾಂಬಾ ಹೊಟೇಲ್ ಎದುರು ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. (bike rider death | hit and run case | tragic accident news) ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಪಘಾತದ ಸುದ್ದಿ ತಿಳಿದ ಕೂಡಲೇ ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (police investigation | accident case Karnataka) ಅಪಘಾತದ ಬಗ್ಗೆ ಮೃತನ ಸಂಬಂಧಿಕರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. (FIR registered | highway accident probe)

ಇದನ್ನೂ ಓದಿ/ಕಾರಿಡಾರ್‌ಗೆ ನುಗ್ಗಿದ ಬಸ್ :  2 ವರ್ಷದ ಮಗು ಸಾವು ಮಹಿಳೆ ಗಂಭೀರ