ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ : ಸರ್ಕಾರದಿಂದ ಕೈದಿಗೆ ಮಂಜೂರಾದ ಹಣ ಬಿಡುಗಡೆ ಮಾಡಲು ಲಂಚ ಬೇಡಿಕೆ ಇಟ್ಟಿದ್ದ ಹಳಿಯಾಳ ಸಬ್ ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. (Karnataka Lokayukta raid, Jail corruption case)
ಹಳಿಯಾಳ ಸಬ್ ಜೈಲಿನಲ್ಲಿ ಜೈಲರ್ ಆಗಿದ್ದ ಕಲ್ಲಪ್ಪ ಗಸ್ತಿ, ಜೈಲಿನಲ್ಲಿ ಕೆಲಸ ನಿರ್ವಹಿಸಿದ್ದ ಕೈದಿ ರಾಜ್ ಕುಮಾರ್ ಅವರಿಗೆ ಸರ್ಕಾರದಿಂದ ಮಂಜೂರಾದ 1.75 ಲಕ್ಷ ಹಣವನ್ನು ಬಿಡುಗಡೆ ಮಾಡಲು60 ಸಾವಿರ ಲಂಚ ಕೇಳಿದ್ದಾನೆಂಬ ಆರೋಪ ಕೇಳಿಬಂದಿದೆ. (Prison corruption India, Bribery case Karnataka)
ಈ ಸಂಬಂಧ ಕೈದಿ ರಾಜ್ ಕುಮಾರ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮುಂಗಡವಾಗಿ 10 ಸಾವಿರವನ್ನು ಫೋನ್ಪೇ ಮೂಲಕ ಪಡೆದಿದ್ದ ಜೈಲರ್ ಕಲ್ಲಪ್ಪ ಗಸ್ತಿಯನ್ನು ವಶಕ್ಕೆ ಪಡೆದಿದ್ದಾರೆ. (Online bribery evidence, PhonePe transaction scam)
ಕಾರವಾರ ಲೋಕಾಯುಕ್ತ ಡಿ.ಎಸ್ಪಿ ಧನ್ಯಾ ನಾಯಕ್ ಅವರ ನೇತೃತ್ವದಲ್ಲಿ, ಇನ್ಸಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ತಂಡ ದಾಳಿ ನಡೆಸಿ ಆರೋಪಿಯನ್ನು ಹಿಡಿದಿದ್ದಾರೆ. (Anti corruption raid Karnataka, Lokayukta action Karwar)
ಪ್ರಕರಣ ಸಂಬಂಧ ಮುಂದಿನ ವಿಚಾರಣೆ ಮುಂದುವರಿದಿದೆ. (Breaking news Karnataka, Crime investigation update)
ಲೋಕಾಯುಕ್ತರ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.. (Government scheme corruption, Public reaction Karnataka)
ಇದನ್ನೂ ಓದಿ/100 ಕಾಳಿಂಗ ಸರ್ಪ ರಕ್ಷಿಸಿದ ಸ್ನೇಕ್ ಪವನ್ : 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆ

