ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಕ್ಷಣದಲ್ಲಿ ಸರ್ಕಾರ ಕುಸಿದರೆ, ಪ್ರಬಲ ಪ್ರತಿಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆಗೆ ಸಿದ್ಧವಾಗಿದೆ ಎನ್ನುವ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗುಟ್ಟುಬಿಟ್ಟುಕೊಟ್ಟಿದ್ದಾರೆ.
ಒಂದು ಕಡೆ ಡಿಕೆಶಿ ಬೆಂಬಲಿಗರು ಕೂಡ ಸಿಎಂ ಬದಲಾವಣೆ ವಿಚಾರವಾಗಿ ಗೌಪ್ಯವಾಗಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದುಉ, ಹೈಕಮಾಂಡ ಭೇಟಿಯಾಗಿ ಸಿಎಂ ಬದಲಾವಣೆ ಕುರಿತಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ. ಒಂದು ವೇಳೆ ಕಾಂಗ್ರೇಸ್ ಹೈಕಮಾಂಡ ಒಪ್ಪಿಗೆ ನೀಡದೆ ಹೋದರೆ ಮುಂದೆ ಯಾವ ತೀರ್ಮಾನ ಮಾಡಬೇಕು ಎನ್ನುವ ಬಗ್ಗೆ ಕೂಡ ಈಗಾಲೇ ನಿರ್ಣಯವಾಗಿದೆ ಎನ್ನಲಾಗಿದೆ. ಹೀಗಾಗಿ ಒಂದಾನೊಂದು ವೇಳೆ ಕಾಂಗ್ರೇಸ್ ಹೈಕಮಾಂಡ ಏನಾದ್ರಾ ಡಿಕೆ ಶಿವಕುಮಾರ ಅವರನ್ನ ಸಿಎಂ ಮಾಡೋದಕ್ಕೆ ಒಪ್ಪಿಗೆ ನೀಡದೆ ಹೋದ್ರೆ ಡಿಕೆಶಿ ಬಣದಲ್ಲಿ ಗುರುಸಿಕೊಂಡಿರುವ 50ಕ್ಕೂ ಹೆಚ್ಚು ಶಾಸಕರು, ಸಚಿವರು ಬಿಜೆಪಿ ಜೊತೆ ಕೈ ಜೋಡಿಸುಲು ಮುಂದಾಗಿದ್ದಾರೆ ಎನ್ನುವು ಚರ್ಚೆ ನಡುವೆಯೇ ಕಾಗೇರಿ ಅವರ. ಹೇಳಿಕೆ ಸಾಕಷ್ಟು ಪುಷ್ಠಿನೀಡುವಂತಾಗಿದೆ.
ಇದೇ ವಿಚಾರವಾಗಿ ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ದಿಶಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವೈಫಲ್ಯವನ್ನು ಮರೆಮಾಚಲು ಕಾಂಗ್ರೆಸ್ ಸರ್ಕಾರ ಅಧಿಕಾರ ಹಂಚಿಕೆ ವಿಚಾರವನ್ನು ಮುನ್ನೆಲೆಗೆ ತರುತ್ತಿದೆ ಎಂದು ಆರೋಪಿಸಿದರು.ಜನರು ಕಾಂಗ್ರೆಸ್ ಸರ್ಕಾರವನ್ನು ಐದು ವರ್ಷ ಆಡಳಿತ ನಡೆಸಲು ಆಯ್ಕೆ ಮಾಡಿದ್ದಾರೆ. ಆದರೆ ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಈಗಾದರೂ ಅಧಿಕಾರದ ಒಳಜಗಳ ಬಿಟ್ಟು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಎರಡುವರೆ ವರ್ಷಗಳ ಅವಧಿಯಲ್ಲಿ ಈ ಸರಕಾರ ಜನರ ವಿಶ್ವಾಸ ಗಳಿಸಲು ಸರ್ಕಾರ ವಿಫಲವಾಗಿದೆ. ಅಭಿವೃದ್ಧಿ ಪರ ನಿಟ್ಟಿನಲ್ಲಿ ಯಾವುದೇ ಸ್ಪಷ್ಟ ಚಟುವಟಿಕೆಗಳು ಕಾಣಿಸುತ್ತಿಲ್ಲ. ಅಧಿಕಾರದ ಪೈಪೋಟಿಯಿಂದ ಆಡಳಿತ ವ್ಯವಸ್ಥೆಯೇ ಕುಸಿಯುವ ಸ್ಥಿತಿಗೆ ಬಂದಿದೆ ಎಂದು ಅವರು ಹೇಳಿದರು. ಯೋಜನೆಗಳ ಜಾರಿ ಸಮರ್ಪಕವಾಗಿಲ್ಲ, ಭ್ರಷ್ಟಾಚಾರ ಹೆಚ್ಚಾಗಿದೆ, ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ. ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಕಾಗೇರಿ ಆರೋಪಿಸಿದರು.
ಅಧಿಕಾರ ಹಂಚಿಕೆ ಕುರಿತ ಒಳಜಗಳದಲ್ಲೇ ಸರ್ಕಾರ ಮುಳುಗಿದ್ದು, ಆಡಳಿತ ವೈಫಲ್ಯ ಮುಚ್ಚಿಹಾಕಲು ಈ ವಿಚಾರವನ್ನು ಜಾಣತನದಿಂದ ಮುನ್ನೆಲೆಗೆ ತರಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ನಡೆಗೆ ಅವರು ಟೀಕಿಸಿದರು.
ಇದನ್ನೂ ಓದಿ/ಹಿಂದೂ ಸಂಗಮದಲ್ಲಿ ಹೆಗಡೆ ಎಂಟ್ರಿ : ಉತ್ತರಕನ್ನಡ ರಾಜಕೀಯ ಕಾದಾಟ ಶುರು…?


