ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಜನರ ಬಹುದಿನಗಳ ಕನಸಾಗಿದ್ದ ಗಂಗಾವಳಿ ಮಂಜಗುಣಿ ಸೇತುವೆಯನ್ನು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಲೋಕಾರ್ಪಣೆ ಮಾಡುವ ಮೂಲಕ ಜನರ ಕನಸನ್ನು ನನಸಾಗಿಸಿದರು. ಈ ವೇಳೆ ವೇದಿಕೆಯಲ್ಲಿದ್ದ ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿಗೆ ಕಾಂಗ್ರೇಸ್ನಲ್ಲಿ ಕಾಂಗ್ರೇಸ್ ಬಾಗಿಲು ತೆರೆದಿಲ್ಲ ಎಂದು ವ್ಯಂಗ್ಯಮಾಡಿದ್ದರು
ಕಾರ್ಯಕ್ರಮದ ವೇದಿಕೆಯಲ್ಲಿದ್ದ ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರು ತಾನೂ ಒಂದೆರಡು ಮಾತುಗಳನ್ನು ಮಾತನಾಡುವುದಾಗಿ ಪ್ರಸ್ತಾಪಿಸಿದರು. ಈ ವೇಳೆ ಕಾರವಾರ ಶಾಸಕ ಸತೀಶ ಸೈಲ್ ಅವರು “ನೀವು ಕಾಂಗ್ರೆಸ್ ಶಾಸಕರಲ್ಲ” ಎಂದು ತಮಾಷೆಯಾಗಿಯೇ ಹೇಳಿದರು.
ಆಗ ಸಿಎಂ ಸಿದ್ದರಾಮಯ್ಯ ಅವರು “ಶೆಟ್ಟ್ರೆ, ನೀವು ಮಾತನಾಡಿ” ಎಂದು ಮಾತ್ನಾಡೋದಕ್ಕೆ ಅವಕಾಶ ಮಾಡಿಕೊಟ್ಟರು. ದಿನಕರ ಶೆಟ್ಟಿ ಅವರಿಗೆ ಮಾತನಾಡಲು ಅವಕಾಶ ನೀಡಿದ ಸಿಎಂ ಅವರು ಬಳಿಕ, “ನೀವು ಕಾಂಗ್ರೆಸ್ಗೆ ಬರ್ತೀನಿ ಅಂದರೂ ನಾವು ನಿಮ್ಮನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ” ಎಂದು ವ್ಯಂಗ್ಯವಾಗಿ ಹೇಳಿದರು. ಇತ್ತೀಚೆಗೆ ಶಾಸಕ ದಿನಕರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು,. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿರೋದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದರೊಂದಿಗೆ ಕಾಂಗ್ರೇಸ್ ಬಾಗಿಲು ತಟ್ಟುತ್ತಿದ್ದ ಶಾಸಕ ದಿನಕರ ಶೆಟ್ಟಿ ಅವರಿಗೂ ನಿರಾಸೆ ಉಂಟಾದಂತಾಗಿದೆ ಅಂತಾ ಕೆಲವರು ಆಡಿಕೊಳ್ಳುವಂತಾಗಿದೆ.
ಇದನ್ನೂ ಓದಿ/ಕಾರವಾರದಲ್ಲಿ 450 ಹಾಸಿಗೆಯ ಹೈಟೆಕ್ ಕ್ರಿಮ್ಸ್ ಆಸ್ಪತ್ರೆ ಕಟ್ಟಡ ಉದ್ಘಾಟನೆ



