ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಮುರುಡೇಶ್ವರದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತರ ಮಹಾಪೂರವೇ ಹರಿದುಬಂದಿತು. ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ಮುರುಡೇಶ್ವರನ ಶ್ರೀಶಿವನ ದರ್ಶನ ಪಡೆದು ಧನ್ಯರಾದರು.
ಬೆಳಗ್ಗಿನಿಂದಲೇ ದೇವಾಲಯದ ಎದುರು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆ ಹಾಗೂ ಸ್ವಯಂಸೇವಕರಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಅಲಂಕಾರ ಭೂಷಿತ ಶಿವನ ಮೂರ್ತಿಯನ್ನು ಕಂಡು ಭಕ್ತರು ಕಣ್ತುಂಬಿಕೊಂಡರು.
ಸಮುದ್ರ ಸ್ನಾನ ಮಾಡಿ ಬಳಿಕ ಶಿವನ ದರ್ಶನ ಪಡೆಯುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. “ಓಂ ನಮಃ ಶಿವಾಯ” ಎಂಬ ಶಿವನಾಮ ಪಠಿಸುತ್ತಾ ಭಕ್ತರು ಭಕ್ತಿಭಾವದಲ್ಲಿ ತಲ್ಲೀನರಾದರು.ಉತ್ಸವದ ಹಿನ್ನೆಲೆಯಲ್ಲಿ ದೇವಾಲಯ ಮತ್ತು ಸುತ್ತಮುತ್ತಲ ಪ್ರದೇಶವನ್ನು ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು.
ಇದನ್ನೂ ಓದಿ/ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ : ಐವರ ರಕ್ಷಣೆ ಇಬ್ಬರ ಬಂಧನ


