ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಜಾತಿ ಗಣತಿ ಪ್ರಕ್ರಿಯೆಯ ಅವಧಿ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆಯನ್ನು ವಿಸ್ತರಿಸಿದೆ. ಮೂಲತಃ ಅಕ್ಟೋಬರ್ 7ರಂದು ಮುಕ್ತಾಯಗೊಳ್ಳಬೇಕಿದ್ದ ರಜೆ, ಇದೀಗ ಅಕ್ಟೋಬರ್ 18ರವರೆಗೆ ಮುಂದುವರಿಯಲಿದೆ.

ಶಾಲೆಗಳು ಅಕ್ಟೋಬರ್ 23ರಿಂದ ಪುನರಾರಂಭಗೊಳ್ಳಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಜಾತಿ ಗಣತಿ ಸಮೀಕ್ಷೆಯಲ್ಲಿ ಶಿಕ್ಷಕರು ಸಹ ಪಾಲ್ಗೊಂಡಿರುವುದರಿಂದ ನಿಗದಿತ ಅವಧಿಯಲ್ಲಿ ಕಾರ್ಯ ಪೂರ್ಣಗೊಳ್ಳಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕಾರಣದಿಂದಲೇ ರಜೆ ವಿಸ್ತರಿಸಲು ನಿರ್ಧರಿಸಲಾಗಿದೆ. ಖಾಸಗಿ ಶಾಲೆಗಳ ವಿಚಾರದಲ್ಲಿ, ಸರ್ಕಾರದ ಈ ನಿರ್ಣಯವು ಅನ್ವಯಿಸುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸ್ವಂತ ವೇಳಾಪಟ್ಟಿಯ ಪ್ರಕಾರ ಪಾಠಗಳನ್ನು ಮುಂದುವರಿಸಲಿವೆ.

ಇದನ್ನು ಓದಿ: ಶಾಲಾ ಸಮಯದ ಬದಲಾವಣೆ : ಶಿಕ್ಷಕರ ಸಂಘಟನೆ ವಿರೋಧ