ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಅಗಸ್ಟ್ 17 ರಂದು ಕಾರವಾರದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ಘಟಕದಿಂದ ಕೊಡಮಾಡುವ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ನಾಗರಾಜ ಹರಪನಹಳ್ಳಿ ಅವರನ್ನ ಆಯ್ಕೆ ಸಮತಿಯು ಆಯ್ಕೆ ಮಾಡಿದೆ, ಎಂದು ಕಾರವಾರ ತಾಲೂಕಾ ಸಂಘದ ಅಧ್ಯಕ್ಷ ಉದಯ ಬರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗಸ್ಟ್ 17ರಂದು ಪತ್ರಿಕಾನಿರ್ವಹಣಾ ಸಮಿತಿ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕಾರವಾರ ಘಟಕದಿಂದ ಜಂಟಿಯಾಗಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿರುವ , ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಗೊಂಡಿರುವ ನಾಗರಾಜ್ ಹರಪನಹಳ್ಳಿ ಅವರು 1998 ರಿಂದ ಪತ್ರಿಕಾರಂಗದಲ್ಲಿದ್ದು, ಜನವಾಹಿನಿ ಪತ್ರಿಕೆಯಲ್ಲಿ 1998-2003 ವರೆಗೆ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಜನಾತರಂಗದಲ್ಲಿ ಐದು ವರ್ಷ, ಈಟವಿ ಕನ್ನಡ ವಾಹಿನಿಯಲ್ಲಿ 3ವರ್ಷ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಳಗಾವಿ ಲೋಕದರ್ಶನದಲ್ಲಿ 2010 ರಿಂದ ಜಿಲ್ಲಾ ವರದಿಗಾರರಾಗಿ ಹಾಗೂ ಪ್ರಸ್ತುತ ಉದಯವಾಣಿ ಪತ್ರಿಕೆಗೆ ಕಾರವಾರ ದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ತಾಲೂಕು ಅಧ್ಯಕ್ಷರಾಗಿ ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳ ಪ್ರಕಟಣೆ:
ಲೇಖಕರಾಗಿರುವ ಹರಪನಹಳ್ಳಿ, ‘ಬಿಸಿಲ ಬಯಲ ಕಡಲು’ ಕವನ ಸಂಕಲನ, ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, ‘ವಿರಹಿ ದಂಡೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರಾದ ನಾಗರಾಜ್ , 1996 ರಿಂದ ಕಾರವಾರದಲ್ಲಿ ನೆಲಸಿದ್ದಾರೆ.
ಕಳೆದ 27 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಜಿಲ್ಲಾ ಪತ್ರಿಕಾಭವ ನಿರ್ವಹಣಾ ಸಮಿತಿಯಿಂದ ಪ್ರತಿವರ್ಷ ಸಹ ಕಾರವಾರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಟ್ಯಾಗೋರ್ ಪ್ರಶಸ್ತಿ ನೀಡಲಾಗುತ್ತಿದ್ದು, ಈವರ್ಷದ ಕೂಡ ಮೂವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ವಿದ್ಯುನ್ಮಾನ ಮಾದ್ಯಮ ವಿಭಾಗದಿಂದ ಸುವರ್ಣ ವಾಹಿನಿ ಜಿಲ್ಲಾ ವರದಿಗಾರ ಭರತ್ ರಾಜ್ ಕಲ್ಲಡ್ಕ, ಮುದ್ರಣ ಮಾದ್ಯಮ ವಿಭಾಗದಿಂದ ನುಡಿಜೇನು ಪತ್ರಿಕೆಗೆ ಉಪಸಂಪಾದಕ ಎಸ್.ಎಸ್ ಸಂದೀಪ್ ಸಾಗರ್, ಹಾಗೂ ಪ್ರಜಾವಾಣಿ ಛಾಯಾಗ್ರಾಹಕ ದಿಲೀಪ್ ರೇವಣಕರ್ ಗೆ ಈ ಬಾರಿ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಿದೆ.
ಇದನ್ನೂ ಓದಿ:ಪೆಟ್ರೋಲ್ ಬಂಕ್ನಲ್ಲಿ ಗಲಾಟೆ : ಹತ್ತಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ