ಕರಾವಳಿಯ ಬೆಳಗಿನ ಜಾವ….
ಕೋಳಿಗಳ ಕೂಗು…. ತುಂತುರು ಮಳೆ… ಕಪ್ಪೆಗಳ ರಿಂಗನ ಕೇಳಿಸುತ್ತಿತ್ತು…. ತೆಂಕಣ ಗಾಳಿಯ ವೇಗಕೆ ಬಾಳೆ ಎಲೆಯ ತುದಿಗಳ ಹಾರಾಟದ ಶಬ್ದ ಕೇಳೋಕೆ ಅದೇನೋ ಖುಷಿ…..
ಆದರೆ ಸುಬ್ಬಮ್ಮನಿಗೆ ಅನುದಿನದಂತೇ ಆದಿನವೂ ಕೂಡಾ ನೀರಸಮಯ… ಬೆಂಕಿಯೊಲೆ ಹಚ್ಚಿ ಹಂಡೆ ಗೆ ತೆಂಗಿನ ಗರಿ ಹಾಕಿ ಕೇರಿಯೆಲ್ಲಾ ಹೊಗೆಯೆಬ್ಬಿಸಿದ್ದಳು….
ಅವಳ ಆ ಒಂಟಿ ಜೀವನ ಕಂಡು ಬೆರಗಾದವರಿಗಿಂತ ಮುಖಸಿಂಡರಿಸಿದವರೇ ಜಾಸ್ತಿ….
ಮುಂಜಾನೆ ಐದುಗಂಟೆಗೇ ಎದ್ದು ಸೌದೆ ತಂದು ದನಗಳಿಗೆ ಮೇವ ಕೊಯ್ದು ಕುಚ್ಚಿಗೆ ಗಂಜಿಗೆ ಅಕ್ಕಿ ಬೇಯಿಸಬೇಕಾದರೆ ಸಮಯ 8 ಗಂಟೆ ಮೊದಲೇ ಬಡಜೀವ ತೇದು ತೇದು ಹಣ್ಣಾಗಿತ್ತು ಬಾಗು ಬೆನ್ನಿನ 70 ರ ಹರೆಯ….. ಇರೋ ಒಂದೆಕರೆ ಹಿತ್ತಲಿನ ಸುತ್ತಲೂ ಕಾಯಿ ಆರಿಸಿ ಜೀವನ ನಡೆಸುತಿದ್ದಳು……
ಎಕ್ಸೆಲ್ ಹೆವಿ ಡ್ಯೂಟೀ ಮೇಲೆ ಟಬ್ ಹಾಕಂಡು ಮೀನು ಮಾರಲು ಬಂದ ಸುರೇಶ ಕೇಳಿದ ‘ಸುಬ್ಬಜ್ಜಿ ಮೀನು ಬೇಕೇನೇ’?
ಅವಳ ಉತ್ತರ ಹೀಗಿತ್ತು ಯಾರು ತಿಂತ್ರು (ತಿನ್ತಾರೆ) ಅಂದ್ಕಂಡ್ ತಗಳಬೇಕಾ? ಕೋಸಾ (ಮಗೂ)….
ಸುರೇಶ ತಟ್ಟಂತಲೇ ಬಾಯಿ ಬಿಟ್ಟ
ಅಜ್ಜಿ ಇನ್ನೂ ಅವ್ರು ಮನೆಗ್ ಬಂದಿಲ್ವಾ, ,? ನಿನ್ನ ಹೆಸರು ಹೇಳ್ಕಂಡ್ ಪುಣೆಯಿಂದ ಇಬ್ರು ಮಕ್ಳು ಬಂದ್ ಮಾರ್ಗದತ್ರ(ಮೇನ್ ರೋಡ್) ನಿಂತಿದಾರೆ…. ನಾನೇ ಹಾದಿ ತೋರಿಸ್ಕೊಟ್ ಮುಂದೆ ಬಂದೆ …
ಸುಬ್ಬಜ್ಜಿ ಮಂದುಗಣ್ಣು ತಗೊಂಡು ಮುಂದೆ ಬಂದ್ಳು..
ಮೊಮ್ಮಕ್ಕಳಿರಬೇಕು ಅಂದು ಸುರೇಶ ಒದರೋ ಮುನ್ನವೇ ಅಜ್ಜಿ ಕಣ್ಣ ಮುಂದೆ 20 ವರ್ಷದ ಹಿಂದಿನ ಕಹಿನೆನಪುಗಳು ತಟ್ಟಂತ ಹಾದು ಹೋದವು………
ಇರ್ಲಿ ಅಂತಾ 50 ರೂಪಾಯಿದು ತಾರ್ಲೆ ತಗಂಡು ವಾಪಾಸ್ ತಿರುಗಿ ಬರುವಾಗ ಭತ್ತದ ಗದ್ದೆ ಹಾಳಿ(ಹಾದಿ) ಯಲ್ಲಿ ಇಬ್ಬರೂ ಬರುತ್ತಿರೋದು ಮಂಜುಮಂಜಾಗಿ ಗೋಚರಿಸಿತು………….
ಮುಂದುವರೆಯುವುದು….
ಕು.ಜೀ… ✍️