ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಚಿರತೆ ದಾಳಿಯಿಂದಾಗಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ತಾಲೂಕಿನ ವಾಸರಕುದ್ರಿಗೆ ಗ್ರಾ.ಪಂ. ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ನಡೆದಿದೆ.
ಸಂತೋಷ ಹೂವಣ್ಣ ಗೌಡ (24) ಚಿರತೆ ದಾಳಿಗೆ ಒಳಗಾದ ಯುವಕನಾಗಿದ್ದಾನೆ.ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ ಅವಿತುಕೊಂಡಿದ್ದು ಎನ್ನಲಾಗಿದೆ. ಮನೆಯಲ್ಲಿಟ್ಟಿರುವ ಬಟ್ಟೆ ತರಲು ಹೋದ ಯುವತಿಯೋರ್ವಳು ಚಿರತೆಯನ್ನು ಕಂಡು ಬೊಬ್ಬೆ ಹೊಡೆದ ಶಬ್ಧಕ್ಕೆ ಅಲ್ಲಿಂದ ಹೊರಗಡೆ ಬಂದಿದೆ. ಆ ಕ್ಷಣದಲ್ಲಿ ಸಂತೋಷ ಗೌಡನು ಮನೆಯಿಂದ ಹೊರಗಡೆ ಬರುತ್ತಿರುವ ಸಂದರ್ಭದಲ್ಲಿ ಆತನ ಮೇಲೆ ಚಿರತೆ ದಾಳಿ ಮಾಡಿದೆ.
https://whatsapp.com/channel/0029VaAvVKA47Xe7I9bdgG31
ದಾಳಿಯ ಪರಿಣಾಮವಾಗಿ 2ಯುವಕನ ಎರಡು ಕೈಗಳಿಗೆ ಚಿರತೆ ಪರಚಿದ್ದು ಆತ ಗಾಯಗೊಂಡಿದ್ದಾನೆ ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ಆತನಿಗೆ ತಾಲೂಕು ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ. ಪಿಐ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಿರತೆಯೊಂದು ಮನೆಯೊಗಳಗೆ ಪ್ರವೇಶಿಸಿ ಮನುಷ್ಯರ ಮೇಲೆ ದಾಳಿ ಮಾಡಿರುವುದನ್ನು ನಮ್ಮೆಲ್ಲರಿಗೆ ಆತಂಕ ಹೆಚ್ಚಿಸಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಮುಂದೆ ಮತ್ತೆ ಹೀಗಾಗದಂತೆ ಸೂಕ್ತ ಕ್ರಮಕೈಗೊಂಡು ಜನರನ್ನು ಮತ್ತು ಜಾನುವಾರಗಳನ್ನು ರಕ್ಷಣೆ ಮಾಡಿಲಿ ಎಂದು ಅಗಸೂರು ಗ್ರಾ.ಪಂ. ಸದಸ್ಯ ಆನಂದು ಗೌಡ ಆಗ್ರಹಿಸಿದ್ದಾರೆ.
ಸುದ್ದಿಬಿಂದು ಓದುಗರಲ್ಲಿ ವಿನಂತಿ ಇದುವರೆಗೆ ತಾವೇಲ್ಲರೂ ಸುದ್ದಿಬಿಂದು ವೆಬ್ ನ್ಯೂಸ್ನ್ನು ಪ್ರೀತಿಯಿಂದ ಸ್ವೀಕರಿಸಿದ್ದಿರಿ. ಸದ್ಯ Broadcastನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕಾರಣ ಈ ಲಿಂಕ್ ಮೂಲಕ ಗ್ರೂಪ್ ಸೇರಿಕೊಳ್ಳುವ ಮೂಲಕ ಹಿಂದಿನಂತೆ ಸುದ್ದಿ ಓದು ಬಹುದಾಗಿದೆ ವಾಟ್ಸಾಪ್ ಚಾನಲ್ ಸೇರಿಕೊಳ್ಳಬಹುದು..https://whatsapp.com/channel/0029VaAvVKA47Xe7I9bdgG31
ಇದನ್ನೂ ಓದಿ