ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ :ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಷತಾ ಪೈ ಕುಟುಂಬಕ್ಕೆ ಸರಕಾರದಿಂದ ನೀಡಲಾದ 25 ಲಕ್ಷ ರೂ ಪರಿಹಾರದ ಪತ್ರವನ್ನು ಶಾಸಕ ಭೀಮಣ್ಣ ನಾಯ್ಕ ಅವರು ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಸಮುಖದಲ್ಲಿ ಮೃತರ ಮನೆಗೆ ತೆರಳಿ ಮೃತರ ಕುಟುಂಬಕ್ಕೆ ಪರಿಹಾರದ ಪತ್ರ ವಿತರಿಸಿ ಸಾಂತ್ವಾನ ಹೇಳಿದರು.

ಈ ವೇಳೆ ಸರ್ಕಾರದ ನಿಲುವಿನ ಬಗ್ಗೆ ಕುಟುಂಬಸ್ಥರು ಅಸಮದಾನ ಹೊರಹಾಕಿದ್ದು, ಭದ್ರತಾ ಲೋಪದಿಂದಲ್ಲೆ ಈ ಘಟನೆ ನಡೆದಿದೆ ಎಂದು ಆರೋಪಿಸಿದ ಕುಟುಂಬಸ್ಥರು ಇಂತಹ ಲೋಪ ಮುಂದೆ ಆಗದಂತೆ ನೋಡುಕೊಳ್ಳುವಂತೆ ತಿಳಿಸಿದ್ದರು. ಮೃತ ಅಕ್ಷತಾ ಹಾಗೂ ಆಶಯ್ ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದರು. ತುಂಬಾ ಬುದ್ದಿವಂತೆ ಹುಡುಗಿ, ಚನ್ನಾಗಿ ಓದಿ ಸಿ.ಎ ಮಾಡಿದ್ದಳು.ಆದರೆ ಸರ್ಕಾರದ ಭದ್ರತಾ ಲೋಪ ಸಾವಿಗೆ ಕಾರಣವಾಯ್ತು.. ಗೇಟನ್ನು ತೆಗೆದಿದ್ದರೇ ಎಷ್ಟೋ ಜನರ ಬದುಕು ಉಳಿಯುತಿತ್ತು ಎಂದು .ನೋವು ತೋಡಿಕೊಂಡರು.

ಮೃತ ಅಕ್ಷತಾ ಪೈ ಕುಟುಂಬವನ್ನು ಭೇಟಿಯಾದ ನಂತರ ಮಾಧ್ಯಗಳಿಗೆ ಹೇಳಿಕೆ ನೀಡಿದ ಶಾಸಕ ಭೀಮಣ್ಣ ನಾಯ್ಕ ಸರ್ಕಾರ ಯಾಕೆ ಹೊಣೆ ಹೊರಬೇಕು..? ವಿಧಾನಸೌಧದ ಮುಂಭಾಗ ಯಾವುದೇ ತೊಂದರೆ ಆಗಲಿಲ್ಲ..ಕ್ರೀಡಾ ಸಂಸ್ಥೆ ಭದ್ರತೆ ತೆಗೆದುಕೊಂಡು ಮಾಡಿದ್ದರೇ ಯಾವುದೇ ತೊಂದರೆಯಾಗಿರುತ್ತಿರಲಿಲ್ಲ. ಗಾಯಾಳುಗಳಿಗೂ ಪರಿಹಾರವನ್ನು ಸರ್ಕಾರ ಹಾಗೂ KSCA ನೀಡಬೇಕು. ಈ ಘಟನೆಗೆ ಗೆದ್ದ ತಂಡ RCB ಕೂಡಾ ಹೊಣೆಯಾಗಲಿದೆ..ಇವತ್ತು ಬಿಜೆಪಿಯವರು ಕೇವಲ ಸರಕಾರದ ಮೇಲೆ ಗೂಬೆ ಕೂರಿಸಿ ಮಾತಾಡ್ತಿದ್ದಾರೆ. ಪೆಹಲ್ಗಾಮ್ ಘಟನೆ, ಕುಂಭ ಮೇಳ ಘಟನೆ ಬಗ್ಗೆ ನಾವು ರಾಜಕಾರಣ ಮಾಡಿಲ್ಲ.ಬಿಜೆಪಿಯವರು ರಾಜಕಾರಣ ಮಾಡ್ತಿದ್ದಾರೆ ಇದು ಸರಿಯಲ್ಲ ಎಂದರು.

ಇದನ್ನೂ ಓದಿ