ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪರಿಸರವನ್ನ ರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಮಹತ್ವದ ಜವಾಬ್ದಾರಿಯಾಗಿದೆ. ಪರಿಸರ‌ ಇದ್ದಾಗ ಮಾತ್ರ ಮನುಷ್ಯ ಜೀವಂತವಾಗಿ ಇರಲು ಸಾಧ್ಯ, ಹೀಗಾಗಿ ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜೊತೆಯಲ್ಲಿ ಪರಿಸರದ ಉಳುವಿಗಾಗಿ ಸಹ ಕಾಳಜಿ ವಹಿಸಬೇಕು ಎಂದು ನಿವೃತ್ತ‌ ಶಿಕ್ಷಕ ಆರ್ ಬಿ ಪಟಗಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬರ್ಗಿ 1,ರಲ್ಲಿ ಹಸಿರು ಇಕೋ ಕ್ಲಬ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದರು.ಹಿಂದೆಲ್ಲಾ ಪ್ರತಿ ಶಾಲೆಯ ಸುತ್ತ ಸಣ್ಣ ಸಣ್ಣ ತೋಟಗಳನ್ನ ಮಾಡಿಕೊಳ್ಳತ್ತಾ ಇದ್ದರು.‌ಆದರೆ ಈಗ ಜಾಗದ ಕೊರತೆಗಳಿಂದಾಗಿ ತೋಟ ಮಾಡಲು ಸಾಧ್ಯವಾಗುತ್ತಿಲ್ಲ. ಇರುವ ಸ್ಥಳದಲ್ಲೆ ಗಿಡಗಳನ್ನ ನೆಟ್ಟು ಬೆಳಸುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು..

ಕಾರ್ಯಕ್ರಮದಲ್ಲಿ ಬರ್ಗಿ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಎಸ್ ಹರಿಕಾಂತ, ಎಸ್,ಡಿ,ಎಂ ಸಿ ಅಧ್ಯಕ್ಷ ಸಂತೋಷ ಗುನಗಾ,ಗ್ರಾ.ಪಂ ಸದಸ್ಯ ನವೀನ್ ಪಟಗಾರ, ಸಿಆರ್‌ಪಿ ಕಿಶೋರ ಭೂಮಕರ್, ಬಿಆರ್‌ಸಿ ಇಸಿಓ ದೀಪಾ ಕಾಮತ್, ಎಸ್ ಡಿ ಎಂ ಸಿ ಸದಸ್ಯರಾದ ಉದಯ ಕೆ ನಾಯ್ಕ, ನಾಗರಾಜ ಪಟಗಾರ, ಕಮಲಾಕರ‌‌ ಗಾವಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣಪತಿ ಪಟಗಾರ ಉಪಸ್ಥಿತರಿದ್ದರು, ಮುಖ್ಯ ಶಿಕ್ಷಕಿ ಶ್ಯಾಮಲಾ‌ ನಾಯಕ ಸ್ವಾಗತಿಸಿದರು, ಶಿಕ್ಷಕಿ ಮಮತಾ ನಾಯಕ ನಿರೂಪಿಸಿದರು..

ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು,ಎಸ್‌ಡಿಎಂಸಿ ಸದಸ್ಯರು ಎಲ್ಲೂ ಸೇರಿ ಶಾಲಾ ಆವರಣದಲ್ಲಿ ಗಿಡಗಳನ್ನ ನೆಟ್ಟು ವಿಶ್ವ ಪರಿಸರ ದಿನವನ್ನ ಅಚ್ಚುಕಟ್ಟಾಗಿ ಆಚರಿಸಿದರು.

ಇದನ್ನೂ ಓದಿ