ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನೈಸರ್ಗಿಕ ತಾಣಗಳ ಮೂಲಕ‌ ಪ್ರವಾಸಿಗರನ್ನ ಸೆಳೆಯು ಜಲಪಾತಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಧುಮ್ಮಿಕ್ಕಲು ಆರಂಭವಿಸುತ್ತವೆ. ಇತಂಹ ಜಲಪಾತಗಳನ್ನ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ನಾಗರಮಡಿ ಜಲಪಾತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸ್ತಾ ಇದ್ದರು. ಆದರೆ ಮಳೆಗಾಲದ‌ಲ್ಲಿ ಅಪಾಯಕಾರಿ ಆಗಿರೋ ಕಾರಣಕ್ಕೆ ಪ್ರವಾಸಿಗರಿಗೆ ಹೋಗದಂತೆ ನಿಷೇಧ. ಹಾಕಲಾಗಿದೆ.

ಪ್ರವಾಸಿಗರ ಹಿತದೃಷ್ಠಿಯ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಈಗ ನಾಗರಮಡಿ ಜಲಪಾತಕ್ಕೆ ಪ್ರವಾಸಿಗರು ಪ್ರವೇಶ ಮಾಡಬಾರದು ಅಂತಾ ಜಲಪಾತದ ಮಖ್ಯದ್ವಾರದಲ್ಲೇನೆ ನಾಮಫಲ ಹಾಕಿದೆ. ಇಲ್ಲಿಗೆ ನಿತ್ಯವೂ ಜಿಲ್ಲೆ ಹಾಗೂ ಹೊರ ಜಿಲ್ಲೆ ಮತ್ತು ರಾಜ್ಯದಿಂದಲ್ಲೂ ಕೂಡ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬಂದು ಹೋಗತ್ತಾ ಇದ್ದರು.ಇದು ಚೆಂಡಿಯಾದಿಂದ ಕೇವಲ ,2‌ಕಿಲೋ‌ಮೀಟರ್ ದೂರದಲ್ಲಿ ಜಲಪಾತವಿದ್ದು,ಒಂದಿಷ್ಟು ದೂರ ಕಾಲ್ನಡಿಗೆಯಲ್ಲೆ ಸಾಗಬೇಕಿದೆ. ಒಮ್ಮೆ ಇಲ್ಲಿಗೆ ಪ್ರವಾಸಿಗರು ಬಂದರೆ ಮತ್ತೆ ಮತ್ತೆ ಬಂದು ಹೋಗತ್ತಾನೆ ಇರುವಂತ ಸ್ಥಳ‌ ಇದಾಗಿದೆ.

ಕಳೆದ ಒಂದು ದಶಕದ ಹಿಂದೆ ಗೋವಾದಿಂದ ಪ್ರವಾಸಿಗರು ನಾಗರಮಡಿ ಫಾಲ್ಸ್ ನಲ್ಲಿ ಆಟವಾಡುತ್ತಿದ್ದ ವೇಳೆ ಕೊಚ್ಚಿಕೊಂಡು ಹೋಗಿ ಐದಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟಿದ್ದರು.ಅದಾದ ಬಳಿಕ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಬಳಿಕ ನಿಧಾನವಾಗಿ ಇಲ್ಲಿಗೆ ಬರೋ ಪ್ರವಾಸಿಗರ ಸಂಖ್ಯೆಯಲ್ಲಿ‌ ಮತ್ತೆ ಏರಿಕೆ ಆಗುತ್ತಿದೆ.ಹೀಗಾಗಿ ಅಪಾಯಕಾರಿಯಾಗಿರುವ ಈ ಜಲಪಾತಕ್ಕೆ ಪ್ರವಾಸಿಗರು ಬರುವುದನ್ನ ಈಗ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧ ಮಾಡಿದೆ.

ಇದನ್ನೂ ಓದಿ.