ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಆಸ್ತಿ ವಿಚಾರಕ್ಕೆ ಸಂಬಂಧಿಸಿ ದಾಯದಿಗಳಿಬ್ಬರೂ ಮಚ್ಚಿನಲ್ಲಿ‌ ಹೊಡೆದಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೊರ್ಸೆಯಲ್ಲಿ ನಡೆದಿದೆ.

ದಾಯಾದಿಗಳಾದ ಮಂಜುನಾಥ್ ನಾಯ್ಕ್ ಹಾಗೂ ಹನುಮಂತ ನಾಯ್ಕ್ ನಡುವೆ ಗಲಾಟೆ ನಡೆದು,ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿ ಮಚ್ಚಿನಿಂದ ಹೊಡೆದಾಡಿಕೊಂಡಿದ್ದಾರೆ.ಶೆಡ್ಡಿನ ಮನೆ ಬಳಿ ಅವಾಚ್ಯವಾಗಿ ಬೈದುಕೊಂಡು ಇಬ್ಬರೂ ಮಚ್ಚು ಬೀಸಿದ್ದಾರೆ. ಗಲಾಟೆಯಲ್ಲಿ ಮಂಜುನಾಥ್ ನಾಯ್ಕ್ ತೊಡೆ, ಕೈ ಬೆರಳುಗಳಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಗೊಂಡ‌ ಮಂಜುನಾಥ ನಾಯ್ಕಗೆ ಕುಮಟಾ‌ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ‌ ಗಂಭೀರ ಗಾಯಗೊಂಡಿರುವುದರಿಂದ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನೂ ಹನುಮಂತ ನಾಯ್ಕ್‌ಗೂ ಕೂಡ ಗಾಯವಾಗಿದ್ದು,ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿದೆ.

ಇದನ್ನೂ ಓದಿ