ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯನ್ನಾಗಿ‌ ಬೀನಾ ಮಂಕಾಳ ವೈದ್ಯ ನೇಮಕ‌ ಮಾಡಿ ಆದೇಶಿಸಿದ್ದಾರೆ
.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಂಕಾಳ್ ವೈದ್ಯ ಅವರ ಪುತ್ರಿಯಾಗಿರುವ ಬೀನಾ ವೈದ್ಯ ಅವರನ್ನ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ರಾಜ್ಯ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಆದೇಶ ಮಾಡಿದ್ದಾರೆ.

ಬೀನಾ ವೈದ್ಯ ಅವರು ಪಕ್ಷ ಸಂಘಟನೆಯಲ್ಲಿ ಕಳೆದ‌ ಕೆಲ‌ವರ್ಷದಿಂದ ಸಕ್ರೀಯವಾಗಿ ತಮ್ಮನ್ನ ತಾವು ತೋಡಗಿಸಿಕೊಂಡು ಬಂದಿದ್ದರು.‌ಅಷ್ಟೆ ಅಲ್ಲದೆ ಕಷ್ಟದಲ್ಲಿದ್ದ ಅದೆಷ್ಟೋ ಬಡ ಕುಟುಂಬದ ಜೊತೆ ನಿಲ್ಲುವ ಮೂಲಕ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಗುರುತಿಸಿಕೊಂಡು ಬಂದಿದ್ದಸಹಾಯ ನೀಡುವ ಮೂಲಕ ನೆರವಾಗುವ ಮೂಲಕ‌ ಗುರುತಿಸಿಕೊಂಡಿದ್ದಾರೆ. ಬೀನಾ ವೈದ್ಯ ಅವರ ಪಕ್ಷ ಸಂಘಟನೆ ಆಧಾರದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ