ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಆಸ್ತಿ ವಿಚಾರವಾಗಿ ಹಾಡು ಹಗಲೇ ಒಂದೇ ಕುಟುಂಬದ ನಾಲ್ವರನ್ನ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ ಮುಖ್ಯ ಆರೋಪಿಗೆ ಮರಣ ದಂಡನೆ ಹಾಗೂ ಆತನ ತಂದೆಗೆ
ಜೀವಾವಾಧಿ ಶಿಕ್ಷೆ ನೀಡಿ ಆದೇಶಿಸಲಾಗಿದೆ

ಭಟ್ಕಳ ತಾಲೂಕಿನಲ್ಲಿ ಕಳೆದ 2023 ರ ಫೆಬ್ರವರಿ 24 ರಂದು ಆಸ್ತಿ ವಿಚಾರಕ್ಕಾಗಿ ಹಾಡವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ತೋಟದ ಮನೆಯೊಂದರಲ್ಲಿ ವಾಸವಿದ್ದ ಶಂಭು ಭಟ್, ಆತನ ಪತ್ನಿ ಮಾದೇವಿ ಭಟ್ ಮಗ ರಾಘು ಭಟ್ ಹಾಗೂ ಸೊಸೆ ಕುಸುಮಾ ಭಟ್ ಎನ್ನುವವರನ್ನ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಒಂದೇ ಕುಟುಂಬದ ನಾಲ್ವರ ಹತ್ಯೆ ಇಡೀ ಉತ್ತರ ಕನ್ನಡ ಜಿಲ್ಲೆಯನ್ನ ಬೆಚ್ಚಿ ಬೀಳಿಸಿತ್ತು, ತನಿಖೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭಟ್ಕಳ ಡಿ.ವೈ.ಎಸ್.ಪಿ ನೇತೃತ್ವದಲ್ಲಿ ಮೂರು ತಂಡಗಳನ್ನ ರಚಿಸಿ ಹತ್ಯೆ ಆರೋಪಿಗಳನ್ನ ಬಂಧಿಸಲು ಕಾರ್ಯಾಚರಣೆಗೆ ಇಳಿದಿದ್ದರು. ಇನ್ನು ತನಿಖೆಗೆ ಇಳಿದ ಪೊಲೀಸರು ಮನೆಯ ಸೊಸೆಯಾಗಿದ್ದ ವಿದ್ಯಾ ಭಟ್ ಎನ್ನುವರ ಸಹೋದರ ವಿನಯ ಭಟ್ ಹಾಗೂ ತಂದೆ ಶ್ರೀಧರ್ ಭಟ್ ಎನ್ನುವವರು ಆಸ್ತಿ ವಿಚಾರದಲ್ಲಿ ಕೊಲೆ ನಡೆದಿರುವುದು ತನಿಖೆ ವೇಳೆ ಗೊತ್ತಾಗಿತ್ತು. ಈ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಇನ್ನು ಜಿಲ್ಲಾ ನ್ಯಾಯಾಧೀಶ್ ಡಿ.ಎಸ್ ವಿಜಯ್ ಕುಮಾರ್ ವಿನಯ್ ಭಟ್ ಎನ್ನುವ ಆರೋಪಿಗೆ ಮರಣ ದಂಡನೆ ಹಾಗೂ ಆತನ ತಂದೆ ಶ್ರೀಧರ್ ಭಟ್ ಎಂಬಾತನಿಗೆ ಜೀವಾವಾಧಿ ಶಿಕ್ಷೆ ನೀಡಿ ಆದೇಶಿಸಲಾಗಿದೆ.

ಕೊಲೆಯಾದ ಶಂಭು ಭಟ್ ಹಿರಿಯ ಮಗನ ಜೊತೆ ವಿದ್ಯಾಭಟ್ ಎಂಬಾಕೆ ವಿವಾಹವಾಗಿತ್ತು. ಈಕೆಯ ಪತಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದ, ಇದಾದ ನಂತರ ಆಸ್ತಿಗಾಗಿ ವಿದ್ಯಾ ಭಟ್ ಕೊಲೆಯಾದ ಶಂಭು ಭಟ್ ಮೇಲೆ ಒತ್ತಡ ಹಾಕುತ್ತಿದ್ದಳು. ಶಂಭು ಭಟ್ ಬಳಿ ಸುಮಾರು 6 ಎಕರೆ ಅಡಿಕೆ ತೋಟವಿದ್ದು, ತೋಟದಲ್ಲಿ ಪಾಲು ಕೊಡುವ ವಿಚಾರದಲ್ಲಿ ವಿದ್ಯಾ ಭಟ್ ಕುಟುಂಬ ಹಾಗೂ ಶಂಭು ಭಟ್ ಕುಟುಂಬದ ನಡುವೆ ಗಲಾಟೆ ನಡೆಯುತ್ತಿತ್ತು. ಕೊಲೆಯಾದ ಶಂಭು ಭಟ್ ಅಂತಿಮವಾಗಿ 1.9 ಎಕರೆ ತೋಟವನ್ನ ವಿದ್ಯಾ ಭಟ್ ಗೆ ನೀಡಿದ್ದರು ಗಲಾಟೆ ಮಾತ್ರ ಮುಂದುವರೆದಿತ್ತು.

ವಿದ್ಯಾ ಭಟ್ ಗೆ ನೀಡಿದ್ದ ತೋಟವನ್ನ ಸಹೋದರ ವಿನಯ್ ಭಟ್ ನೋಡಿಕೊಳ್ಳುತ್ತಿದ್ದ. ಫೆಬ್ರವರಿ 24 ರ ಮಧ್ಯಾಹ್ನ ತಂದೆ ಶ್ರೀಧರ್ ಭಟ್ ಜೊತೆ ತೋಟಕ್ಕೆ ಆಗಮಿಸಿದ ವೇಳೆಯಲ್ಲಿ ಮತ್ತೆ ಗಲಾಟೆ ನಡೆದಿತ್ತು. ಈ ಗಲಾಟೆ ತಾರಕಕ್ಕೆ ಏರಿ ಮನೆಯಲ್ಲಿದ್ದ ನಾಲ್ವರನ್ನ ವಿನಯ್ ಭಟ್ ಹಾಗೂ ಆತನ ತಂದೆ ಶ್ರೀಧರ್ ಭಟ್ ಕೊಚ್ಚಿ ಕೊಲೆ ಮಾಡಲಾಗಿತ್ತು.

ಕೊಲೆ ಸಂದರ್ಭದಲ್ಲಿ ರಾಘು ಭಟ್ ಹಾಗೂ ಕುಸುಮಾ ಭಟ್ ಅವರ ಇಬ್ಬರು ಮಕ್ಕಳು ಮನೆಯಲ್ಲಿ ಇಲ್ಲದಿದ್ದರಿಂದ ಇಬ್ಬರು ಬದುಕುಳಿದಿದ್ದರು. ಭಟ್ಕಳದಲ್ಲಿ ನಡೆದಿದ್ದ ಈ ಘಟನೆ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಸದ್ಯ ನ್ಯಾಯಾಲಯ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನ ವಿಧಿಸಿದೆ. ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ತಂದೆ ಮಗನಿಗೆ ನ್ಯಾಯಾಲಯ ತಕ್ಕ ಶಿಕ್ಷೆಯೇ ನೀಡಿದ್ದು ಅಪರಾದ ಪ್ರಕರಣದಲ್ಲಿ ತೊಡಗುವವರಿಗೆ ಎಚ್ಚರಿಕೆ ಕೊಟ್ಟಂತಾಗಿದೆ..

ಇದನ್ನೂ ಓದಿ