ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಅಘೋಷಿತ‌ ಯುದ್ದಕ್ಕೆ ತಾತ್ಕಾಲಿಕ ವಿರಾಮ ನೀಡಿದ ಬೆನ್ನಲ್ಲೆ ಪಾಕಿಸ್ತಾನ ಯುದ್ದ ವಿರಾಮ ಉಲ್ಲಂಘನೆ ಮಾಡಿರುವುದಾಗಿ ಕೇಂದ್ರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಕ್ರಿ ಸುದ್ದಿಗೋಷ್ಟಿ ಮೂಲಕ ಮಾಹಿತಿ ನೀಡಿದ್ದಾರೆ.

ಪಾಕ್ ನಡೆಯನ್ನ ವಿಕ್ರಮ್ ಮಿಕ್ರಿ ತೀವ್ರವಾಗಿ ಖಂಡಿಸಿದ್ದಾರೆ.ಕಳೆದ ಮೂರು ಗಂಟೆಯ ಹಿಂದಷ್ಟೆ ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಪಾಕಿಸ್ತಾನ ಕೊಟ್ಟ ಮಾತುಗಳನ್ನ ಉಳಿಸಿಕೊಂಡಿಲ್ಲ. ಕೊನೆಯದಾಗಿ ಎಚ್ಚರಿಕೆ ನೀಡಲಾಗಿದೆ.‌ಪಾಕ್‌ ಘೋರ ಉಲ್ಲಂಘನೆ ಮಾಡಿದೆ. ಇದನ್ನ ಇಷ್ಟಕ್ಕೆ ನಿಲ್ಲಿಸದೆ ಹೋದರೆ ಪಾಕ್‌ಗೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಕ್‌ಗೆ ಉತ್ತರ ಕೊಡಲು ಸೈನ್ಯಕ್ಕೆ ಅಧಿಕಾರಿ ನೀಡಲಾಗಿದೆ. ಉಲ್ಲಂಘನೆ ಮಾಡಿರುವುದಕ್ಕೆ ನೇರವಾಗಿ ಪಾಕ್ ಹೊಣೆಯಾಗಿದೆ. ಪಾಕಿಸ್ತಾನದ ದಾಳಿಯನ್ನ ತೆಡೆಯಲು ನಮ್ಮ ಸೈನ್ಯ ಶಕ್ತವಾಗಿದೆ. ಇದನ್ನ ಭಾರತ ಗಂಭೀರವಾಗಿ ಪರಿಗಣಿಸಲಾಗಿದೆ.

ಇದನ್ನೂ ಓದಿ