ಸುದ್ದಿಬಿಂದು ಬ್ಯುರೋ‌ ವರದಿ
ಕಾರವಾರ :ನಗರಸಭೆ ಮಾಜಿ ಸದಸ್ಯ ಸತೀಶ್ ಕೋಳಂಬಕರ್ ಹತ್ಯೆಗೂ ಮೊದಲು ಹೊಟೇಲ್‌ ಒಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಕಾರವಾರ ನಗರಠಾಣೆಯ ಪಿಎಸ್‌ಐ ಸೇರಿ ನಾಲ್ವರನ್ನ ಅಮಾನತ್ ಮಾಡಲಾಗಿದೆ ಎನ್ನಲಾಗಿದೆ.

ಸತೀಶ್ ಕೋಳಂಬಕರ್ ಹತ್ಯೆಗೂ ಮೊದಲು ನಗರದ ಹೊಟೇಲ್ ಒಂದರಲ್ಲಿ ಹತ್ಯೆ ಆರೋಪಿ ಹಾಗೂ ಆತನ ಸ್ನೇಹಿತರು ಸತೀಶ್ ಕೋಳಂಬಕರ್ ನಡುವೆ ಮಾರಾಮಾರಿ ಗಲಾಟೆ ನಡೆದಿತ್ತು ಎನ್ನಲಾಗಿದೆ.ಅಂದು ನಡೆದ ಗಲಾಟೆಯ ಬಗ್ಗೆ ನಗರ ಠಾಣೆಯ ಪೊಲೀಸರು ಹೊಟೇಲ್ ಮಾಲೀಕರಿಂದ ದೂರು ಪಡೆದುಕೊಂಡಿದ್ದರೆ ಈ ಕೃತ್ಯ‌ ಆಗುತ್ತಿರಲಿಲ್ಲ.‌ ಹೀಗಾಗಿ ಘಟನೆ ನಂತರ ನಗರ ಠಾಣೆಯ ಪೊಲೀಸರು ಕ್ರಮಕ್ಕೆ‌ ಮುಂದಾಗಿಲ್ಲ ಎಂದು ಆರೋಪಿಸಿ ಓರ್ವ ಪಿಎಸ್‌ಐ,ಓರ್ವ ಮಹಿಳಾ ಪಿಎಸ್ಐ ಹಾಗೂ ಇಬ್ಬರೂ ಕಾನ್ಸ್ಟೇಬಲ್‌ಗಳನ್ನ ಅಮಾನತ್ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ