ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಕಳೆದ‌ ಎರಡು ದಿನಗಳ ಹಿಂದೆ ಬೆಳ್ಳಂ‌ ಬೆಳ್ಳಿಗ್ಗೆ
ನಗರಸಭಾ ಮಾಜಿ‌ ಸದಸ್ಯನಿಗೆ ನಗರದ ಸಂತೆ ಪೇಟೆಯಲ್ಲಿ ಚಾಕು ಇರಿದು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಕಾರವಾರ ಪೊಲೀಸರು ಗೋವಾದಲ್ಲಿ ಬಂಧಿಸಿ ಕರೆತಂದಿದ್ದಾರೆ.

ನಿತೇಶ್ ತಾಂಡೇಲ ಬಂಧಿತ ಆರೋಪಿ ಆರೋಪಿಯಾಗಿದ್ದಾನೆ. ಈತ ರವಿವಾರ ಬೆಳಿಗ್ಗೆ ನಗರದ ಬಿಎಸ್ ‌ಎನ್ ಎಲ್ ಕಚೇರಿ ಎದುರಿನ ರಸ್ತೆಯಲ್ಲಿ ನಗರಸಭೆಯ ಮಾಜಿ ಸದಸ್ಯ ಸತೀಶ್ ಕೋಳಂಕರ್‌ಗೆ ಚಾಕು ಇರಿದು ಬರ್ಭರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ, ಕೊಲೆ‌ ಮಾಡಿ ಈತ ಗೋವಾಕಡೆ‌ ಹೋಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನ ಬಂಧನಕ್ಕಾಗಿ ಗೋವಾಕ್ಕೆ ತೆರಳಿದ್ದರು. ಆದರೆ ಈತ ಅಲ್ಲಿಯೂ ಸಹ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದ ಎನ್ನಲಾಗಿದೆ. ಇದೀಗ ಕಾರವಾರ ಪೊಲೀಸ ಕೊಲೆ ಆರೋಪಿತ ನಿತೇಶ್ ತಾಂಡೇಲ ಗೋವಾದ ಕಡಲತೀರದ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದು ಆತನ್ನ ಹಿಡಿದು‌ ಕಾರವಾರಕ್ಕೆ ಕರೆತಂದಿದ್ದಾರೆ.

ಸತೀಶ್ ಕೋಳಂಕರ್ ಮಾಲಿಕತ್ವದ ಅಂಗಡಿಯನ್ನ ಇದೆ ನಿತೇಶ್ ತಾಂಡೇಲ ಬಾಡಿಗೆಗೆ ಪಡೆದಿದ್ದ ಎನ್ನಲಾಗಿದ್ದು, ಬಳಿಕ ಅಂಗಡಿ ಬಿಟ್ಟರು ಸಹ ಸತೀಶ ಕೋಳಂಕರ್ ನಿತೇಶ್ ಕೊಟ್ಟಿದ್ದ ಮುಂಗಡ ಹಣ ವಾಪಸ್ ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದೆ ಕಾರಣಕ್ಕೆ ಕಳೆದ ಐದಾರು ತಿಂಗಳಿನಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ.ಈ ವಿಚಾರವಾಗಿ ರವಿವಾರ ನಗರದ ನಡು ರಸ್ತೆಯಲ್ಲಿ ಇಬ್ಬರ ನಡುವೆ ಗಲಾಟೆ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿತ್ತು.

ಉತ್ತರ ಕನ್ನಡ ಎಸ್ ಪಿ ಎಂ ನಾರಾಯಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಕಾರವಾರ ಪೊಲೀಸರು ಆರೋಪಿಯನ್ನ ಕಾರವಾರಕ್ಕೆ ತಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.ಇನ್ನೂ ಈತನ ವಿಚಾರಣೆಯ ಬಳಿಕ ಈ ಕೊಲೆಯ ಹಿಂದೆ ಯಾರೆಲ್ಲಾ ಇದ್ದಾರೆ.? ಈತ ಒಬ್ಬನೆ ಸೇರಿ ಹತ್ಯೆ ಮಾಡಿದ್ದಾನ ಎನ್ನುವ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

ಇನ್ನೂ ಸತೀಶ ರ್ಕೋಳಂಕರ್‌ ಹತ್ಯೆಯಾಗ ಬಳಿಕ ಆತನ ಮೃತ ದೇಹವನ್ನ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ವೇಳೆ ಸತೀಶ ಕೋಳಂಕರ್‌ ಪುತ್ರಿ ತನ್ನ ತಂದೆಯನ್ನ ನಿತೇಶ್ ತಾಂಡೇಲ್ ಎಂಬಾತನ ಹತ್ಯೆ ಮಾಡಿರುವುದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದು, ಆಕೆಯ ಹೇಳಿಯನ್ನ ಆಧರಿಸಿ ನಿತೇಶ್ ತಾಂಡೇಲ್‌ಗಾಗಿ ಪೊಲೀಸರು ಶೋಧ ನಡೆಸಿದ್ದರು.

ಇದನ್ನೂ ಓದಿ