ಸುದ್ದಿಬಿಂದು ಬ್ಯುರೋ ವರದಿ
ಗೋಕರ್ಣ : ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಅವರಿಗೆ 2025ರ ಗ್ಲೋಬಲ್ ಅಚಿವರ್ಸ್ ಅವಾರ್ಡ್ ಲಭಿಸಿದೆ.

ವಿದೇಶಿ ನೆಲದಲ್ಲಿ ವಿಶ್ವವಾಣಿ ಸಂಸ್ಥೆ ಮತ್ತು ರಷ್ಯಾ ಕಾನ್ಹೆಟ್ ಸಹಯೋಗದೊಂದಿಗೆ ಅಪೂರ್ವ ಸಾಧಕರಿಗೆ ನೀಡುವ ಪ್ರಶಸ್ತಿ ಇದಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ರಾಘವೇಂದ್ರ ನಾಯಕ ರಷ್ಯಾದ ಮಾಸ್ಕೊ ನಗರದಲ್ಲಿ ಇದೇ ತಿಂಗಳ 23ಏಪ್ರಿಲ್ 2025ರಂದುಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಮಹತ್ವಪೂರ್ಣ ಜೀವನವನ್ನು ಚೆನ್ನಾಗಿ ನಿರೂಪಿಸಿದರೆ ಅದು ಒಂದು ಜೀವನ ತತ್ವವಿದ್ದಂತೆ ಎಂದು ಫ್ರೆಂಚ್ ಲೇಖಕ ಮಾರ್ವಾ ಹೇಳುತ್ತಾರೆ. ತಮ್ಮ ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ಸಾಮಾಜಿಕ ಬದ್ಧತೆ ಹೊಂದಿ, ಆಧುನಿಕ ಜಗತ್ತಿನಲ್ಲಿ ಸಂಬಂಧಗಳು ಸಂಕೀರ್ಣಗೊಳ್ಳುತ್ತಿರುವಾಗ ಮನುಷ್ಯರ ಮಧ್ಯೆ ಎದ್ದು ನಿಂತಿರುವ ಅಹಂ ಬೇದಭಾವಗಳ ಗೋಡೆಗಳನ್ನು ಮುರಿದು ಸೂ ಮನಸು ಸುಕ್ರತ್ತ್ಯಗಳನ್ನು ಬೆಸೆಯುತ್ತ ಮುನ್ನುಡಿ ಇಡುವಲ್ಲಿ ಸಮರ್ಥ ಸಾಧಕರಾಗಿ ಗೋದಾವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ ಬೆಳೆದಿದ್ದಾರೆ.

ಪರಿಶ್ರಮ ಮತ್ತು ಸಾಧನೆ ಇಲ್ಲದೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವಿಲ್ಲ.ಬೆಟ್ಟ ಎಂದಿಗೂ ಬಾಗುವುದಿಲ್ಲ ಆದರೆ ಕಷ್ಟಪಟ್ಟು ಏರಿದ ಮೇಲೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ ಎಂಬ ಸರ್ವಕಾಲಿಕ ನುಡಿಯಂತೆ ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಕ್ಷೇತ್ರದಲ್ಲಿ ಪಾದರ್ಪಣೆ ಮಾಡಿ ಹುಬ್ಬಳ್ಳಿಯಲ್ಲಿ ಗೋದಾವರಿ ಇನ್ಪ್ರಾ ಎನ್ನುವ ಕಂಪನಿಯನ್ನು ಪ್ರಾರಂಭಿಸಿ, ಜೊತೆಗೆ ಗೋದಾವರಿ ಇಂಡಸ್ಟ್ರೀಸ್ ಆರಂಭ ಮಾಡಿ ಅಲ್ಲಿಯ ಸುತ್ತಮುತ್ತಲಿನ ನಾಗರಿಕರಿಗೆ ಸಹಕರಿಸಿ ಆರ್ಥಿಕ ನೆರವನ್ನ ನೀಡುವುದರ ಮೂಲಕ ಶೈಕ್ಷಣಿಕ ಪ್ರಗತಿಗೆ ನೆರವಾಗಿ ಇವರು ನಮ್ಮವರು ಎನಿಸಿಕೊಂಡವರು ರಾಘವೇಂದ್ರ ದೇವರಾಬಾವಿ.

ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ತಾಲೂಕುಗಳಲ್ಲಿ ಗೋದಾವರಿ ಸೌಹಾರ್ದ ಸಹಕಾರಿಯನ್ನು ಪ್ರಾರಂಭಿಸಿ ಸಂಕಷ್ಟದಲ್ಲಿರುವ ಹಾಗೂ ಸ್ವಯಂ ಉದ್ಯೋಗವನ್ನು ಮಾಡುವ ಹಲವು ಗ್ರಾಹಕರಿಗೆ ಆರ್ಥಿಕ ನೆರವನ್ನು ನೀಡಿ ಜೊತೆಗೆ ಹಲವಾರು ದುಡಿಯುವ ಕೈಗಳಿಗೆ ಕೆಲಸವನ್ನು ನೀಡಿದ್ದಾರೆ..

ತನ್ನ ತಾಯಿ ಗೋದಾವರಿಯ ಹೆಸರನ್ನು ಶಾಶ್ವತವಾಗಿ ಇಡಬೇಕೆನ್ನುವ ಕನಸು ಇವರು ದಕ್ಷಿಣದ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಗೋಕರ್ಣದಲ್ಲಿ ಹೋಟೆಲ್ ದಿ ಗೋದಾವರಿ ಎನ್ನುವ ಅತ್ಯಂತ ಸುಸಜ್ಜಿತ ಸುಂದರವಾದ ತ್ರೀ ಸ್ಟಾರ್ ಹೋಟೆಲ್ ಅನ್ನು ನಿರ್ಮಿಸಿ ಪ್ರವಾಸೋದ್ಯಮಕ್ಕೆ ಹೋಟೆಲ್ ಉದ್ಯಮದಲ್ಲಿ ಹೊಸ ಟಚ್ ನೀಡಿದ್ದಾರೆ. ಹೊಟೆಲ್ ದಿ ಗೋದಾವರಿ ಪ್ರವಾಸಿಗರಿಗೆ ಸ್ವರ್ಗದಂತಿದೆ.

ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವುದು, ತಮ್ಮ ಸೌಹಾರ್ದ ಸಹಕಾರಿಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕಾರಿಯ ಅರ್ಥಕ್ಕೆ ಮಹತ್ವ ಬರುವಂತೆ ನೋಡಿಕೊಳ್ಳುತ್ತಿರುವ ಇವರ ಈ ಎಲ್ಲ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಇವರಿಗೆ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ ಎಂಬುದು ಮುಖ್ಯವಲ್ಲ ಬದುಕಿಗೆ ಹೇಗೆ ಜೀವ ತುಂಬಿದ ಎಂಬುದು ಮುಖ್ಯ.ಕಲೆ, ಶಿಕ್ಷಣ, ಸಾಹಿತ್ಯ,ಕ್ರೀಡೆ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕಾರ್ಯಗಳಿಗೆ ಸಹಕರಿಸಿ ಅವುಗಳ ಜೀವಂತಿಕೆಗೆ ಇವರು ಸಹಕಾರಿಯಾಗಿದ್ದಾರೆ. ಸ್ನೇಹಕ್ಕೆ ಮೌಲ್ಯಕ್ಕೆ ವಿಶೇಷವಾದ ಬೆಲೆ ನೀಡುವ ಗುಣವನ್ನು ರಾಘವೇಂದ್ರ ನಾಯಕ ರವರಿಂದ ಕಲಿಯಬೇಕು.

ಸ್ನೇಹಕ್ಕೆ ಅಪರಿಮಿತ ಬೆಲೆ ನೀಡುವ ತಾನು ನಂಬಿದ ಮೌಲ್ಯ ಸಿದ್ದಾಂತಗಳಿಗಾಗಿ ನಿಷ್ಟುರವಾದಿಯಾಗಲು ಹೇಸದ ವ್ಯಕ್ತಿತ್ವ. ಮೇಲ್ನೋಟಕ್ಕೆ ಒಂದು ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಹೋದರು ಅವರ ಒಳಹೊಕ್ಕು ನೋಡಿದರೆ ಸುಂದರವಾದ ಮಾನವೀಯ ಅಂತಕರಣದ ತೋಟವೇ ತೆರೆದುಕೊಳ್ಳುತ್ತದೆ ಅಲ್ಲಿ ಹೋರಾಟದ ಶಿಸ್ತಿದೆ. ಬದುಕಿದೆ, ಕೆಚ್ಚಿದೆ,ಸಾಧನೆಯ ಸಾಹಸಗಾಥೆ ಇದೆ, ಪ್ರಾಮಾಣಿಕತೆಯ ಸಿಂಚನವಿದೆ, ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹೃದಯವಿದೆ.

ಇಂತಹ ವ್ಯಕ್ತಿತ್ವವೇ ರಾಘವೇಂದ್ರನಾಯಕ ದೇವರಬಾವಿ.. ಇವರಿಗೆ ಹತ್ತು ಹಲವಾರು ಪ್ರಶಸ್ತಿಗಳು ಗೌರವಗಳು ಭಾಜನವಾಗಿವೆ. ಇಂತಹ ಸಾಧಕರಿಗೆ ವಿಶ್ವವಾಣಿ ವಿದೇಶಿ ನೆಲದಲ್ಲಿ ಈ ಗೌರವ ನೀಡುತ್ತಿರುವುದು ಅವರಿಗೆ ದೊರೆತ ಪ್ರಶಸ್ತಿಗಳ ಸಾಲಿನಲ್ಲಿ ಕಿರೀಟಕ್ಕೆ ಪೋಣಿಸಿದ ಮುತ್ತು ಈ ಪ್ರಶಸ್ತಿ ಆಗಲಿದೆ.

ಇದನ್ನೂ ಓದಿ