ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಿನ ಕೆಳಗಿನ ಇಟಗುಳಿಯ ಮನೆಯೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದ ವೇಳೆ‌ ದಾಳಿ ನಡೆಸಿದ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು 13ಮಂದಿ ಅಂದರ್ ಬಾಹರ್ ಆಟಗಾರರನ್ನ ಹಾಗೂ 54900ವಶಕ್ಕೆ ಪಡೆಯಲಾಗಿದೆ.

ಶಿರಸಿ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಕುಮಾರ ಎಂ ಅವರು ಗಸ್ತಿನಲ್ಲಿರುವಾಗ ದಾಳಿ ನಡೆಸಿದ್ದಾರೆ. ಕೆಳಗಿನ ಇಟಗುಳಿ ಗ್ರಾಮದ ರಾಮಚಂದ್ರ ವಿಠ್ಠಲ ಹೆಗ್ಗಡೆಯವರ ಮನೆಯಲ್ಲಿ ಸುಮಾರು 10 ರಿಂದ 13 ಜನರು ಸೇರಿ ಪಂಥಕಟ್ಟಿಕೊಂಡು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇಲೆ‌ ದಾಳಿ ನಡೆಸಲಾಗಿದೆ.

ರಾಮಚಂದ್ರ ವಿಠ್ಠಲ ಹೆಗಡೆ, ಮಂಜುನಾಥ ಸುಬ್ರಾಯ
ಕೇಶವ ಮಹಾಬಲೇಶ್ವರ ಹೆಗಡೆ,ಮಂಜುನಾಥ ರಾಮಚಂದ್ರ ಹೆಗಡೆ, ಮಹೇಶ ರಾಮಚಂದ್ರ ಹೆಗಡೆ, ನಾರಾಯಣ ವೆಂಕಟರಮಣ ಹೆಗಡೆ, ವಿನಯ ಮಹಾಬಲೇಶ್ವರ ಹೆಗಡೆ,ಕಮಲಾಕರ ಮಹಾಬಲೇಶ್ವರ ಭಟ್,ಆನಂದ ಮಂಜುನಾಥ ಹೆಗಡೆ, ಮಂಜುನಾಥ ಸತ್ಯನಾರಾಯಣ ಹೆಗಡೆ,ಗಣಪತಿ ಶಾಂತರಾಮ ಹೆಗಡೆ, ಮಹಾಬಲೇಶ್ವರ ಶ್ರೀಪತಿ ಹೆಗಡೆ, ಕಾರ್ತಿಕ್ ಗಣಪತಿ ಹೆಗಡೆ ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ.

ಒಟ್ಟು 54,900/- ರೂಪಾಯಿ ನಗದು 07 ಮೊಬೈಲ್ ಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ವಶಕ್ಕೆ ಪಡೆದಿದ್ದಾರೆ.ದಾಳಿಯಲ್ಲಿ ಸಿಬ್ಬಂದಿಗಳಾ ರಾಘವೇಂದ್ರ, ಸಿ. ಹೆಚ್. ಷಣ್ಮುಖ ಮಿರಾಶಿ, ಮಾರುತಿ ಗೌಡ ಹಾಜರಿದ್ದರು. ದಾಳಿಯ ಬಗ್ಗೆ ಪೊಲೀಸ್ ಅಧಿಕ್ಷಕರು. ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಪೊಲೀಸ್ ಉಪಾಧಿಕ್ಷಕರು ಶಿರಸಿ ಉಪವಿಭಾಗ ಹಾಗೂ ಪೊಲೀಸ್ ನೀರಿಕ್ಷಕರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ಮಾರ್ಗದರ್ಶನ ನೀಡಿ ದಾಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ