ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ವಿಶ್ವದಲ್ಲಿನ ಒಟ್ಟು ನೀರಿನ ಪೈಕಿ 97.5 ಶೇಕಡಾ ಸಮುದ್ರ ಸೇರುತ್ತದೆ.ಉಳಿದ 2.5 ಶೇಕಡಾ ಹಿಮ ರೂಪದಲ್ಲಿದೆ. ಮಾನವ ಉಪಯೋಗಕ್ಕೆ ತಕ್ಕಷ್ಟು ನೀರು ಅತೀವ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿದೆ. ಹೀಗಾಗಿ ಪ್ರತಿಯೊಬ್ಬರು ನೀರನ್ನ ಮಹತ್ವ ಅರಿತು ಮಿತವಾಗಿ ಖರ್ಚು ಮಾಡಬೇಕಿದೆ.ನೀರನ್ನು ಸಂರಕ್ಷಿಸುವುದು ಬಹಳ ಅಗತ್ಯವಾಗಿದೆ.
ಈಗಾಗಲೇ ರಾಜ್ಯದ ಅನೇಕ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಹತ್ತಾರೂ ಕಿಲೋ ಮೀಟರ ದೂರ ಸಾಗಿ ನೀರು ತರಬೇಕಾದ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಭೂಮಿ ಒಳಗಿನ ಅಮೂಲ್ಯ ಸಂಪತ್ತು ಅಂದರೆ ನೀರು. ಅದರೆ ನೀರಿನ ಮಹತ್ವದ ಬಗ್ಗೆ ಸರಕಾರ ಅದೆಷ್ಟೆ ಜಾಗೃತಿಗಳನ್ನ ಮೂಡಿಸುತ್ತಿದ್ದರು ಸಹ ಇನ್ನೂ ಜನ ಎಚ್ಚೇತ್ತುಕೊಂಡಿರುವಂತೆ ಕಾಣುತ್ತಿಲ್ಲ.ಹನಿ ಹನಿ ನೀರಿಗೂ ನಾವುಗಳು ಇಂದು ಹಣ ಕೊಟ್ಟು ಖರೀದಿ ಮಾಡಬೇಕಾದ ಪರಿಸ್ಥಿತಿ ಇದೆ.ಇನ್ನೂ ಕೆಲವು ಕಡೆಗಳಲ್ಲತ್ತು.ಹಣ ಕೊಟ್ಟರು ನೀರು ಸಿಗದ ಪರಿಸ್ಥಿತಿ ಇದೆ.
ಹೀಗಾಗಿ ಪ್ರತಿಯೊಬ್ಬರು ನೀರನ್ನ ಉಪಯೋಗಿಸುವಾಗ ಯೋಚನೆ ಮಾಡಿ ಉಪಯೋಗಿಸಬೇಕಿದೆ.ಭೂಮಿಯ ಮೇಲೆ ಜೀವಿಸುವ ಮನುಷ್ಯರಿಗಷ್ಟೆ ಅಲ್ಲದೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಸಹ ನೀರು ಅಮೂಲ್ಯವಾಗಿದೆ.ಅದೆಷ್ಟೋ ಮಂದಿ ತಮ್ಮ ಮನೆಯಲ್ಲಿ ಸಾಕಷ್ಟು ನೀರು ಇದೆ ಎಂದು ಬೇಕಾದಂತೆ ಖರ್ಚು ಮಾಡುವವರನ್ನ ಕೂಡ ಕಂಡಿದ್ದೇವೆ.
ಭೂಮಿ ಒಳಗಿನ ಸಂಪತ್ತು ಯಾವ ಕ್ಷಣದಲ್ಲಿ ಏನಾಗಲಿದೆ ಎನ್ನುವುದನ್ನ ಯಾರಿಂದಲ್ಲೂ ಹೇಳಲು ಸಾಧ್ಯವಿಲ್ಲ..ಆ ಕಾರಣಕ್ಕಾಗಿ ಪ್ರತಿಯೊಬ್ಬರು ಬೇಸಿಗೆಯಲ್ಲಿ ಯೋಚನೆ ಮಾಡಿ ನೀರು ಖರ್ಚು ಮಾಡಬೇಕಿದೆ..ಈಗಲೇ ಅನಗ್ಯತ್ಯವಾಗಿ ನೀರು ಬಳಸಿಕೊಂಡು ಮುಂದಿನ ಪೀಳಿಗೆಗಳ ಬಗ್ಗೆ ಆಲೋಚಿಸದೆ ಇದ್ದರೆ ಮುಂದಿನ ನೀರಿಲ್ಲದೆ ಜೀವನ ಅತಂತ್ರವಾಗಿಸುವುದು ಬೇಡ, ಯೋಚಿಸಿ, ಆಲೋಚಿಸಿ ಮಿತವಾಗಿ ನೀರು ಬಳಸಿ. ಹನಿ.ಹನಿ..ನೀರು ಅಮೂಲ್ಯ..
ಇದನ್ನೂ ಓದಿ